ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ ಪ್ರಕರಣ: ಸುದ್ದಿವಾಹಿನಿ ತಂತ್ರಜ್ಞ ಯುವಕನ ಮನೆ ಜಾಲಾಡಿದ ಎಸ್ಐಟಿ

ವಿಜಯಪುರದಲ್ಲಿ ಸಿ.ಡಿ ಜಾಡು
Last Updated 14 ಮಾರ್ಚ್ 2021, 1:26 IST
ಅಕ್ಷರ ಗಾತ್ರ

ವಿಜಯಪುರ: ಸಿ.ಡಿಯ ಜಾಡು ಹಿಡಿದು ಹೊರಟಿರುವ ವಿಶೇಷ ತನಿಖಾ ತಂಡ ಸುದ್ದಿವಾಹಿನಿಯೊಂದರ ತಾಂತ್ರಿಕ ಉದ್ಯೋಗಿ ಶ್ರವಣ್‌ ಎಂಬ ಯುವಕನ ಮನೆಯ ಮೇಲೆ ಶನಿವಾರ ಬೆಳಗಿನ ಜಾವ ದಾಳಿ ನಡೆಸಿ, ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಶ್ರವಣ್ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು,ಬಸವೇಶ್ವರ ಬಡಾವಣೆಯ ಮನೆಯ ಮೇಲೆ ದಾಳಿ ನಡೆದಾಗ ಆತನ ತಂದೆ ಸುರೇಶ್ ಮತ್ತು ಅಣ್ಣ ಶರಣ್‌ ಇದ್ದರು.

ಕಂಪ್ಯೂಟರ್, ಸಿ.ಡಿ, ಪೆನ್‌ಡ್ರೈವ್ ವಶಪಡಿಸಿಕೊಳ್ಳಲಾಗಿದ್ದು, ಶರಣ್‌ನನ್ನು ಪೊಲೀಸರು ವಿಚಾರಣೆಗಾಗಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ದಾಳಿ ವೇಳೆ ₹ 25 ಲಕ್ಷ ಮೊತ್ತದ ಡಿ.ಡಿ ಕೂಡ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾದ ಸರ್ವರ್‌ ಹ್ಯಾಕ್‌?: ಸಿ.ಡಿ ಎಡಿಟಿಂಗ್, ಅಪ್‌ಲೋಡಿಂಗ್ ಕಾರ್ಯದಲ್ಲಿ ಕಿಂಗ್‌ಪಿನ್ ಆಗಿದ್ದ ಶ್ರವಣ್, ರಷ್ಯಾದ ಸರ್ವರ್ ಹ್ಯಾಕ್ ಮಾಡಿ ಸಿ.ಡಿ ಅಪ್‌ಲೋಡ್ ಮಾಡಿದ್ದಾನೆ. ಕಂಪ್ಯೂಟರ್‌ನ ಪಾಸ್‌ವರ್ಡ್ ಪತ್ತೆಯಾಗಬೇಕಿದೆ. ಶ್ರವಣ್‌ ಕೆಲವು ಪ್ರಭಾವಿ ರಾಜಕಾರಣಿಗಳೊಂದಿಗೆ ಗುರುತಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT