‘ಹಿಂದೆ ಬಿಜೆಪಿಯ ಕೆಲವು ನಾಯಕರು ವಾಲ್ಮೀಕಿ ಸ್ವಾಮೀಜಿಯವರನ್ನು ನನ್ನ ನೇತೃತ್ವದ ಸರ್ಕಾರದ ವಿರುದ್ಧ ಎತ್ತಿ ಕಟ್ಟಿದ್ದರು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸರ್ಕಾರದ ಕಡೆಯಿಂದ ಯಾರೂ ಸ್ವಾಮೀಜಿಯವರ ಜತೆ ಚರ್ಚಿಸಿಲ್ಲ. ತಕ್ಷಣವೇ ಸ್ವಾಮೀಜಿ ಜತೆ ಮಾತುಕತೆ ನಡೆಸಿ, ಧರಣಿ ಅಂತ್ಯಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.