ಏನಿದೆ ಸ್ಟಿಕ್ಕರ್ನಲ್ಲಿ?: ಸಚಿವ ಸುಧಾಕರ್ ಭಾವಚಿತ್ರದ ಮುಖದ ಮೇಲೆ ಶುಕ್ರವಾರ ರಾತ್ರಿ ಈ ಪೋಸ್ಟರ್ ಅಂಟಿಸಲಾಗಿದೆ. ‘ಚಾಮರಾಜನಗರ ಆಕ್ಸಿಜನ್ ದುರಂತ 24 ಜನ ಸಾವು. ಮಹಾಜನಗಳೇ ನಮ್ಮನ್ನು ನಂಬಿದರೆ ಕಳೆದ ಬಾರಿಯ ಹಾಗೆಯೇ
ನಿಮಗೆ ಬೆಡ್ ಆಗಲಿ, ಆಕ್ಸಿಜನ್ ಆಗಲಿ ಸಿಗುವುದಿಲ್ಲ. ಪ್ರಾಣ ಉಳಿಸಿಕೊಳ್ಳುವ ಆಸೆ ಇದ್ದರೆ ಮಾಸ್ಕ್ ಧರಿಸಿ’ ಎಂಬ ಬರಹವಿದೆ. ಸ್ಟಿಕ್ಕರ್ ಅಂಟಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.