‘ಅಲ್ಲಿ ಸಿಲುಕಿದ್ದ, ಸಿಲುಕಿರುವ ಯಾವ ವಿದ್ಯಾರ್ಥಿಯೂ ಭಾರತ ಬೇಡ ಎಂದು ಹೇಳಿಲ್ಲ. ನಮ್ಮ ಕಷ್ಟದ ಸಮಯದಲ್ಲಿ, ಸಹಾಯ ಮಾಡಬೇಕಾದ ಜವಾಬ್ದಾರಿ ಇದ್ದರೂ, ಸರ್ಕಾರ ನಮ್ಮ ಸಹಾಯಕ್ಕೆ ಬರಲಿಲ್ಲ ಎಂದು ಹೇಳಿದೆವಷ್ಟೆ. ಇದನ್ನು ದೊಡ್ಡವರು ಅರ್ಥ ಮಾಡಿಕೊಳ್ಳಬೇಕು. ವಿವೇಕವೇ ಇಲ್ಲದೆ ನಮ್ಮ ಬಗ್ಗೆ ಟ್ರೋಲ್ ಮಾಡುವ, ನಮ್ಮನ್ನು ಬೈದು ವಿಡಿಯೊಗಳನ್ನು ಮಾಡುವವರಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.