ಪ್ರಾಸ್ತಾವಿಕ ಮಾತನಾಡಿದ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, ಸಮಾಜದ ಜನರು ಶಿಕ್ಷಣ, ರಾಜಕೀಯದಲ್ಲಿ ಹಿಂದುಳಿದಿದ್ದಾರೆ. ನಾಗರಿಕತೆ ಆರಂಭದಿಂದಲೂ ಗುಡ್ಡಗಾಡುಗಳಲ್ಲಿ ಬದುಕು ಕಟ್ಟಿಕೊಂಡು ಬಂದಿದ್ದಾರೆ. ಪ್ರವರ್ಗ ’2 ಎ’ ಬದಲು, ಉತ್ತರ ಭಾರತದ ರಾಜ್ಯಗಳಂತೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಸಾಮಾಜಿಕ ನ್ಯಾಯ ದೊರಕಿಸಬೇಕು. ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ವಿಶ್ವಕರ್ಮರ ಅಥವಾ ಜಕ್ಕಣಾಚಾರಿ ಅವರ ಹೆಸರು ಇಡಬೇಕು ಎಂದು ಕೋರಿದರು.