‘ಕೇಂದ್ರದ ಮೂರು ಹೊಸ ಕಾನೂನುಗಳು ಕೃಷಿ ಸಂಸ್ಕರಣೆ, ಮಾರುಕಟ್ಟೆಗಳ ಮೇಲೆ ಕಾರ್ಪೊರೇಟ್ ನಿಯಂತ್ರಣಕ್ಕೆ ಕಾರಣವಾಗುತ್ತವೆ ಎಂದು ರೈತರು ಸರ್ಕಾರಕ್ಕೆ ವಿವರವಾಗಿ ವಿವರಿಸಿದ್ದಾರೆ. ಇವುಗಳನ್ನು ರದ್ದುಗೊಳಿಸುವ ತನಕ ಮುಷ್ಕರ ಮುಂದುವರಿಸುವ ನಿರ್ಧಾರವನ್ನು ರೈತ ಸಂಘಟನೆಗಳು ಮಾಡಿವೆ. ಗಣರಾಜ್ಯೋತ್ಸವದಂದು ರೈತ ಸಂಘಟನೆಗಳು ಘೋಷಿಸಿದ ಕಿಸಾನ್ ಪೆರೇಡ್ನಲ್ಲಿ ದೆಹಲಿ ಮತ್ತು ದೇಶದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ಪಾಲ್ಗೊಳ್ಳುತ್ತಾರೆ. ದೇಶದ ಸಮಸ್ತ ಜನತೆಯೂ ಈ ಮುಷ್ಕರನಿರತ ರೈತರಿಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದ್ದಾರೆ.