ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ನಕಲಿ, ತನಿಖೆಯಾಗಲಿ: ಸುರಪುರ ಶಾಸಕ ರಾಜೂಗೌಡ ಆಗ್ರಹ

Last Updated 6 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ಯಾದಗಿರಿ: ‘ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ವಿಡಿಯೊ ಕಟ್ ಅಂಡ್ ಪೇಸ್ಟ್ ಮಾಡಿದ್ದು ಗೊತ್ತಾಗುತ್ತದೆ.ಆ ಯುವತಿಗೆ ಎಲ್ಲಾ ಭಾಷೆ ಕಲಿಸಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಐದಾರು ಭಾಷೆ ಮಿಕ್ಸಿಂಗ್ ಮಾಡಿ ಮಾತನಾಡಿದ್ದು ಇದೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದ್ದು, ತನಿಖೆಯಾಗಬೇಕು’ ಎಂದು ಸುರಪುರ ಶಾಸಕ ರಾಜೂಗೌಡ ಶನಿವಾರ ಆಗ್ರಹಿಸಿದರು.

‘ಯುವತಿ ಸಂತ್ರಸ್ತೆಯೇ ಆಗಿದ್ದರೆ ಇಷ್ಟೊತ್ತಿಗೆ ಹೊರಗೆ ಬರುತ್ತಿದ್ದರು. ಆದರೆ, ಬಂದಿಲ್ಲ. ಇದು ಪೂರ್ವನಿಯೋಜಿತ ಕೃತ್ಯ. ವಿಡಿಯೊ ಕಾಲ್‌ನಲ್ಲಿ ಯಾರೂ ಅಷ್ಟು ಸಲುಗೆಯಿಂದ ಮಾತನಾಡುವುದಿಲ್ಲ. ವಿಡಿಯೊ ಇವೆ ಎಂದು ಬೆದರಿಸುವವರು ಹೆಚ್ಚಾಗಿದ್ದಾರೆ. ದಿನೇಶ್ ಕಲ್ಲಹಳ್ಳಿ ಹಿಂದೆ ಬೇರೆಯದ್ದೇ ಶಕ್ತಿಗಳಿವೆ. ಎಲ್ಲವೂ ಬಯಲಿಗೆ ಬರಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT