‘ವಿದ್ಯಾಗಮದ ಸಂದರ್ಭದಲ್ಲಿ, ಕಳೆದ ಬಾರಿ ಶಾಲೆಗಳನ್ನು ಪ್ರಾರಂಭಿಸಿದಾಗ ನಾನು ಅಸಂಖ್ಯ ಮಕ್ಕಳನ್ನು, ಪೋಷಕರನ್ನು ಖುದ್ದಾಗಿ ಭೇಟಿ ಮಾಡಿ ಅವರ ಸಂತಸವನ್ನು ಅರಿತಿದ್ದೆ. ಕಳೆದ ತಿಂಗಳು, ಈ ಆಗಸ್ಟ್ 3ನೆಯ ವಾರದಿಂದ ಶಾಲೆಗಳನ್ನು ಆರಂಭಿಸುವ ಇಂಗಿತ ವ್ಯಕ್ತಪಡಿಸಿದ್ದೆವು. ತರಗತಿ ಕಲಿಕೆಗೆ ಬೇರಾವುದೇ ಪರ್ಯಾಯ ಇಲ್ಲ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ, ಸಮಾಜದ ಹಿತಕ್ಕೆ ಶಾಲಾ ಕಲಿಕೆಯಷ್ಟೇ ಪೂರಕ ಎನ್ನುವುದು ನನಗೆ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರ ತೆಗೆದುಕೊಂಡ ನಿಲುವು ಪೂರಕವಾಗಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.