ಆರೋಪಿಯ ಅಣ್ಣ ಲೋಕೇಶ್ ಗೌಡ ಅವರು ಶಿಕ್ಷಕ ಹುದ್ದೆಗೆ ನೇಮಕಾತಿ ಆದೇಶ ಲಭಿಸಿದ ಕೆಲವೇ ದಿನಗಳ ನಂತರ ಮೃತಪಟ್ಟರು. ಅವರ ನೇಮಕಾತಿ ಪತ್ರ ಸೇರಿದಂತೆ ಎಲ್ಲಾ ದಾಖಲೆಯನ್ನು ಶಿಕ್ಷಣ ಇಲಾಖೆಗೆ ನೀಡಿ ತಾನೇ ಲೋಕೇಶ್ ಗೌಡ ಎಂದು ಬಿಂಬಿಸಿಕೊಂಡ ಲಕ್ಷ್ಮಣೇಗೌಡ, ಪಿರಿಯಾ ಪಟ್ಟಣದ ಮುದ್ದನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1998ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದರು. ಬಳಿಕ ಜಿಲ್ಲೆಯ ವಿವಿಧ ಶಾಲೆಗಳಲ್ಲಿ 24 ವರ್ಷ ಕಾರ್ಯನಿರ್ವಹಿಸಿದ್ದಾರೆ.