‘ರಾಜ್ಯ ಸರ್ಕಾರವು ಪಠ್ಯಪುಸ್ತಕಗಳನ್ನು ಮರುಪರಿಷ್ಕರಿಸಲು ನಿಯೋಜಿಸಿದ್ದ ಸಮಿತಿಯೇ ಕಾನೂನುಬಾಹಿರವಾಗಿದೆ. ಸರ್ಕಾರಿ ಆದೇಶವಿಲ್ಲದೆಯೇ, ಕೇವಲ ಶಿಕ್ಷಣ ಸಚಿವರ ಮಾತಿನ ಮೇಲೆ ರಚಿಸಲಾಗಿದೆ. ಈ ಸಮಿತಿಯು ಮರುಪರಿಷ್ಕರಿಸಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಕ್ರಮ ಖಂಡನೀಯ’ ಎಂದು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.