‘ಮೂಲ ಪರಿಷ್ಕರಣೆಯ ಪಠ್ಯದಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ಮರು ಪರಿಷ್ಕರಣೆಯಲ್ಲಿ ಅಳವಡಿಸಿದ್ದಾರೆ ಎಂಬ ಬರಗೂರರ ಮಾತೇ ಸತ್ಯ. ಮರು ಪರಿಷ್ಕರಣೆಯಲ್ಲಿ ‘ಕಾಯಕವೇ ಕೈಲಾಸ - ಇದು ಅವರ ಮುಖ್ಯ ಬೋಧನೆಗಳಲ್ಲಿ ಒಂದಾಗಿದೆ’ ಎಂದು ಸೇರಿಸಿದ್ದಾರೆ. ‘ಕಾಯಕವೇ ಕೈಲಾಸ’ ಎಂದು ಹೇಳಿದವರು ಆಯ್ದಕ್ಕಿ ಮಾರಯ್ಯನವರು. ಮೂಲಪರಿಷ್ಕರಣೆಯಲ್ಲಿ ಈ ಮಾತು ಇರಲಿಲ್ಲ. ಮರುಪರಿಷ್ಕರಣೆಯಲ್ಲಿ ಈ ಮಾತು ಸೇರಿಸಿದ್ದಲ್ಲದೆ, ಬರಗೂರು ಸಮಿತಿ ಪರಿಷ್ಕರಣೆ ಪಠ್ಯದಲ್ಲಿ ಇಲ್ಲದಿದ್ದ ‘ಚಟುವಟಿಕೆ’ಯ ಸೂಚನೆಗಳನ್ನು ಕೊಟ್ಟಿದ್ದಾರೆ. ಇದಿಷ್ಟು ಪ್ರೊ. ಬರಗೂರು ಹೇಳಿದಂತೆ ‘ಅಲ್ಪಸ್ವಲ್ಪ’ ಬದಲಾವಣೆಯಲ್ಲದೆ ಮತ್ತೇನು’ ಎಂದೂ ಪ್ರಶ್ನಿಸಿದ್ದಾರೆ.