ರಾಜ್ಯ ಸರ್ಕಾರದ ಮೇಲೆ ಹಿರಿಯ ಮುಖಂಡ ಬಿ.ಎಲ್.ಸಂತೋಷ್ ಅವರ ‘ಹಿಡಿತ’ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಬುಧವಾರ ಗದುಗಿನಲ್ಲಿ ಪ್ರತಿಕ್ರಿಯಿಸಿದ ಅವರು, ‘ಬಿ.ಎಲ್.ಸಂತೋಷ್ ರಾಷ್ಟ್ರ ನಾಯಕರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರ ಈ ಮೂವರು ಕೂಡ ಜತೆಜತೆಯಾಗಿ ಹೋಗಬೇಕು. ಸರ್ಕಾರ ಮತ್ತು ಪಕ್ಷ ಜತೆಯಾಗಿದ್ದಾಗ ಮಾತ್ರ ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ’ ಎಂದು ಹೇಳಿದರು.