‘ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವರು ದುಂಡಾವರ್ತನೆ ತೋರಿದ್ದರು. ಆ ಸಮಯದಲ್ಲಿ ಪ್ರತಿಭಟನಕಾರರ ಬಗ್ಗೆ ಪ್ರಧಾನಿ ಮೋದಿ ಅವರು ಗೂಂಡಾಗಳು, ನಕ್ಸಲರು, ದಲ್ಲಾಳಿಗಳು ಎಂದು ಪ್ರತಿಕ್ರಿಯಿಸಿದ್ದು ನಿಜ. ಆದರೆ, ಯಾರೋ ಒಬ್ಬರು ಮಾಡಿದ ತಪ್ಪಿಗೆ ಎಲ್ಲ ರೈತರಿಗೆ ಶಿಕ್ಷೆ ಆಗಬಾರದು ಎಂಬ ಕಾಳಜಿಯಿಂದ ಈಗ ಪ್ರಧಾನಿ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.