‘ಸ್ಥಳೀಯವಾಗಿ ಯಾರು ಮೃತಪಟ್ಟರೂ ಬಹುತೇಕ ಸಂದರ್ಭಗಳಲ್ಲಿ ನನಗೆ ಕರೆ ಬರುತ್ತದೆ. ಎಲ್ಲ ವಿಧಿಗಳು ಪೂರ್ಣಗೊಳ್ಳುವ ತನಕ ಇದ್ದು, ಆ ಮನೆಯವರಿಗೆ ಒಂದಿಷ್ಟು ಸಾಂತ್ವನ ಹೇಳಿ, ಶೋಕದ ಮನೆಯಲ್ಲಿ, ಕಿರುನಗೆ ಮೂಡುವಂತಹ ಮಾತನಾಡಿ ಬರುವುದು ನನ್ನ ಜ್ಯಾಯಮಾನ. ಪಾಲಕರು ಮಾಡಿದ ಪುಣ್ಯ, ಈ ಕೆಲಸಕ್ಕೆ ನನ್ನನ್ನು ಪ್ರೇರೇಪಿಸಿದೆ. ಅನಾಯಾಸವಾಗಿ ಕಾರ್ಪೊರೇಟರ್ ಸ್ಥಾನವೂ ನನಗೆ ದೊರೆತಿದೆ’ ಎನ್ನುವಾಗ ಅವರಿಗೆ ಸಂತೃಪ್ತ ಭಾವ.