ಅಡುಗೆ ಸಿಬ್ಬಂದಿಯ ಸಹಾಯ ಪಡೆದು, ಮಕ್ಕಳಿಗೆ ಸರ್ಕಾರ ನೀಡುವ ಹಾಲಿನ ಜೊತೆ ‘ಸಂಗಮ ದಾಸೋಹ’ ಯೋಜನೆಯನ್ನು ನಿರಂತರ ಏಳು ತಿಂಗಳು ಆಯೋಜಿಸಿದರು. ಉಪ್ಪಿಟ್ಟು, ಅವಲಕ್ಕಿ, ಪುಳಿಯೋಗರೆ, ಸಿರಿಧಾನ್ಯದ ಪುಲಾವು ನೀಡಿದರು. ಇದರ ಪ್ರಯೋಜನ ಪಡೆಯುವ ಮಕ್ಕಳ ಸಂಖ್ಯೆಯೂ ಅಧಿಕವಾಯಿತು. ಪಕ್ಕದ ಅಂಗನವಾಡಿ ಪುಟಾಣಿಗಳೂ ಬಂದು ಆಹಾರ ಸೇವಿಸಿದರು. ಆಗಾಗ ಬೇರೆ ಬೇರೆ ಶಾಲೆಗಳಿಗೂ ತೆರಳಿ ಅಲ್ಲಿನ ಮಕ್ಕಳಿಗೂ ಬಾಳೆಹಣ್ಣುಗಳನ್ನು ವಿತರಿಸಿದರು.