‘ಈ ಹಿಂದೆ ನಡೆದಿದ್ದ ಕೆಲವು ಹತ್ಯೆ, ದಾಳಿಯಲ್ಲೂ ಎಸ್ಡಿಪಿಐ, ಪಿಐಎಫ್ ಪಾತ್ರವಿರುವುದು ಸಾಬೀತಾಗಿದೆ. ಕೇಂದ್ರಕ್ಕೆ ರಾಜ್ಯದಿಂದ ಸಮರ್ಥವಾದ ವರದಿ ಹೋಗಲಿದೆ. ಬಳಿಕ ಕೇಂದ್ರವು ಕ್ರಮ ಕೈಗೊಳ್ಳಲಿದೆ’ ಎಂದರು.
‘ದಿನೇಶ ಗುಂಡೂರಾವ್ ಅವರು ಸಾಕಷ್ಟು ಓದಿಕೊಂಡಿದ್ದಾರೆ. ಒಳ್ಳೆಯ ಹಿನ್ನೆಲೆ ಇರುವವರು. ಆದರೆ, ಯಾವಾಗಲೂ ದಾರಿತಪ್ಪಿಸುವ, ಸತ್ಯಕ್ಕೆ ದೂರವಾದ ಮಾತನ್ನೇ ಆಡುತ್ತಿದ್ದಾರೆ. ಮನೆಯಲ್ಲಿ ಅವರಿಗೆ ಒತ್ತಡ ಇರಬಹುದು’ ಎಂದು ಟೀಕಿಸಿದರು.