ಮೈಸೂರು: ಕೋವಿಡ್ ಲಾಕ್ಡೌನ್ ನಿಮಿತ್ತ ಪ್ರಯಾಣಿಕರ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮೈಸೂರು– ಬೆಂಗಳೂರು ನಡುವಿನ ಮೆಮು ಎಕ್ಸ್ಪ್ರೆಸ್ ಸೇರಿದಂತೆ ಕೆಲವೊಂದು ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ಮೈಸೂರು ವಿಭಾಗ ಪುನರಾರಂಭಿಸಿದೆ.
ರಾಜ್ಯರಾಣಿ ಎಕ್ಸ್ಪ್ರೆಸ್ (ಗಾಡಿ ಸಂಖ್ಯೆ 06567/ 06568), ಚಾಮುಂಡಿ ಎಕ್ಸ್ಪ್ರೆಸ್ (06569/ 06570), ರೈಲು ಸಂಖ್ಯೆ 06559, 06560, ಮತ್ತು ಟಿಪ್ಪು ಎಕ್ಸ್ಪ್ರೆಸ್ (06201/ 06202) ರೈಲುಗಳು ಮೈಸೂರು– ಬೆಂಗಳೂರು ನಡುವೆ ಪ್ರತಿದಿನ ಸಂಚಾರ ರಂಭಿಸಿವೆ.
ಮೈಸೂರು– ಬಾಗಲಕೋಟೆ ನಡುವಿನ ಬಸವ ಎಕ್ಸ್ಪ್ರೆಸ್ (07307/ 07308) ರೈಲು ಸಂಚಾರ ಜೂನ್ 20 ರಿಂದ ಆರಂಭವಾಗಲಿದೆ. ಮೈಸೂರು– ಕೊಚ್ಚುವೇಳಿ (06316/ 06315) ನಡುವಿನ ರೈಲು ಸಂಚಾರ ಜೂನ್ 16 ರಿಂದಲೇ ಸೇವೆ ಆರಂಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.