‘ದಾಳಿ ನಡೆಸಿದ ಸ್ಥಳದಿಂದ ಸುಮಾರು 5 ಕಿ.ಮೀ ದೂರದಲ್ಲಿ ಆನೆ ಪತ್ತೆಯಾಗಿತ್ತು. ಅರಿವಳಿಕೆ ಮದ್ದು ಹಾರಿಸಿ ಸೆರೆ ಹಿಡಿದಿದ್ದೇವೆ. ಒಟ್ಟು 4 ಆನೆಗಳು ಕಾಣಿಸಿಕೊಂಡಿದ್ದವು. ಆದರೆ, ಈ ಒಂಟಿ ಸಲಗವೇ ಇಬ್ಬರನ್ನು ಬಲಿಪಡೆದಿತ್ತು. ಇದನ್ನು ಖಚಿತಪಡಿಸಿಕೊಂಡು ಒಂಟಿ ಸಲಗವನ್ನು ಮಾತ್ರ ಸೆರೆಹಿಡಿದಿದ್ದು, ದುಬಾರೆ ಆನೆ ಶಿಬಿರಕ್ಕೆ ಸಾಗಿಸಲಾಗುವುದು’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಪಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್ ತಿಳಿಸಿದರು.