‘ಕೋವಿಡ್ ಮಾರಣಾಂತಿಕ ರೂಪಪಡೆದುಕೊಂಡಿದೆ. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಈ ಪಿಡುಗನ್ನು ತಡೆಯಬಹುದಾಗಿದೆ. ಕೊರೊನಾ ಮಾತ್ರವಲ್ಲ ಇತರ ರೋಗಗಳಿಂದ ಮುಕ್ತವಾಗಲೂ ಲಸಿಕೆ ಪ್ರಯೋಜನಕಾರಿಯಾಗಿದೆ. ಎಲ್ಲೆಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆಯೋ ಅಲ್ಲಿಗೆ ಹೋಗಿ ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಅಲ್ಲಾಹು ಎಲ್ಲರನ್ನೂ ಈ ರೋಗದಿಂದ ಗುಣಮುಖರನ್ನಾಗಿ ಮಾಡಲಿ. ಈಪಿಡುಗನ್ನು ಆದಷ್ಟು ಬೇಗ ತೊಲಗಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.