ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೆ.ಆರ್. ಪುರದ ಶ್ರೀ ಮಹರ್ಷಿ ವಾಲ್ಮೀಕಿ ಆಧಿ ಗುರುಪೀಠದ ಸಂಸ್ಥಾಪಕ ಎಲ್. ಮುನಿಸ್ವಾಮಿ (ಸಾಮಾಜಿಕ ಕ್ಷೇತ್ರ), ಚಿಕ್ಕಬಳ್ಳಾಪುರದ ಎನ್. ನಾಗಪ್ಪ (ಇತರ ಕ್ಷೇತ್ರ), ಧಾರವಾಡದ ನಾಗಪ್ಪ ಎಚ್. ಕೋಣಿ (ಇತರ ಕ್ಷೇತ್ರ), ಕೂಡ್ಲಿಗಿಯ ಪಿ. ಪದ್ಮಾ (ಕಲಾ ಕ್ಷೇತ್ರ), ಮೈಸೂರಿನ ಸುಭಾಷ್ ಎಸ್.ಎಚ್. (ಸಾಮಾಜಿಕ ಕ್ಷೇತ್ರ) ಮತ್ತು ಬಳ್ಳಾರಿಯ ಉಷಾರಾಣಿ (ಕಲೆ ಮತ್ತು ಸಮಾಜ ಸೇವೆ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಡಾ. ಕಡ್ಲಬಾಳ ಪನ್ನಂಗಧರ ಅಧ್ಯಕ್ಷತೆಯ ಆಯ್ಕೆ ಸಮಿತಿ ಪುರಸ್ಕೃತರನ್ನು ಆಯ್ಕೆಮಾಡಿದೆ ಎಂದರು.