ಅಧಿವೇಶನ ನಡೆಯುತ್ತಿದ್ದರಿಂದ ವಿಧಾನಸೌಧ ಸುತ್ತಮುತ್ತ ಬಿಗಿ ಭದ್ರತೆ ಇದೆ. ಇದರ ನಡುವೆಯೇ ಸಾಕಷ್ಟು ಮಂದಿ, ವಿಧಾನಸೌಧ ಅಕ್ಕ–ಪಕ್ಕದಲ್ಲಿ ಓಡಾಡುತ್ತಿದ್ದಾರೆ. ಕೆಂಗಲ್ ಗೇಟ್ ಎದುರೇ ಗುರುವಾರ ಸಂಜೆ ಡಾಂಬರು ಕಿತ್ತು ರಸ್ತೆ ಕುಸಿದಿತ್ತು. ರಸ್ತೆಯ ಕೆಳಭಾಗದಲ್ಲಿ ಗುಹೆ ಆಕಾರದ ಜಾಗ ಕಂಡಿತ್ತು. ಕುಸಿದ ಸ್ಥಳವನ್ನು ಗಮನಿಸಿದ ಪೊಲೀಸರು, ಸುತ್ತಮುತ್ತ ಬ್ಯಾರಿಕೇಡ್ ನಿಲ್ಲಿಸಿದರು. ಸ್ಥಳದ ಬಳಿ ಯಾರೂ ಸಂಚರಿಸದಂತೆ ತಡೆದರು.