‘ಕಾಫಿ ಬೆಳೆಸುವ ಯೋಚನೆ ಹೇಗೆ ಬಂತು’ ಎಂದು ಗುಡ್ಡಪ್ಪ ಅವರನ್ನು ಪ್ರಶ್ನಿಸಿದರೆ, ‘ಉತ್ತರ ಕರ್ನಾಟಕದಲ್ಲಿ ಕಾಫಿ ಬೆಳೆಯಬಹುದೇ ಎಂದು ಪ್ರಯೋಗ ಮಾಡುವ ಮನಸ್ಸಾಯಿತು. ಲಾಭ ಬರದಿದ್ದರೂ ಪರವಾಗಿಲ್ಲ. ಒಮ್ಮೆ ಬೆಳೆದು ನೋಡಲು ಮುಂದಾದೆ. ಪ್ರತಿ ಎಕರೆಗೆ 450 ಸಸಿ ಹಚ್ಚಿದೆ. ಜೊತೆಗೆ ಅಂತರ ಬೆಳೆಯಾಗಿ ಅಡಿಕೆ ಸಸಿಗಳನ್ನು ಬೆಳೆಸಿದೆ. ಎರಡು ವರ್ಷ ಬೆಳೆ ತೆಗೆಯದೆ ಹಾಗೆ ಬಿಟ್ಟೆ. ಉತ್ತಮ ಫಸಲು ಬರಲಾರಂಭಿಸಿತು. ಉತ್ತಮ ಬೆಲೆಯೂ ಸಿಕ್ಕಿತು. ಎರಡು ವರ್ಷಗಳಿಂದ ನೇರ ಮಾರುಕಟ್ಟೆಯಲ್ಲೇ ಮಾರುತ್ತಿರುವೆ’ ಎಂದರು.