ಅಪಘಾತದ ಹಿಂದಿನ ದಿನ ಕುಲಪತಿ ಎಂ.ಬಿ. ಚೆಟ್ಟಿ ಅವರು ದೆಹಲಿಯಿಂದ ಗೋವಾಕ್ಕೆ ಬಂದಿರುವ ಶಂಕೆ ಇದೆ. ಇದು ತನಿಖೆಯಿಂದ ಹೊರಬರಲಿದ್ದು, ಕುಲಪತಿ ಆಪ್ತ ಕಾರ್ಯದರ್ಶಿ ಮನ್ಸೂರ್ ಮುಲ್ಲಾ ಯಾವ ಉದ್ದೇಶದಿಂದ ವಿ.ವಿ.ಯ ಕಾರು ಬಳಕೆ ಮಾಡಲಿಲ್ಲ ಎಂಬ ಸಂಶಯ ಕಾಡುತ್ತಿದೆ. ಮೃತಪಟ್ಟಿರುವ ಮಹಿಳೆಯರ ಕುಟುಂಬ ಸದಸ್ಯರಿಗೆ ಪರಿಹಾರಾರ್ಥವಾಗಿ ವಿ.ವಿ.ಯಲ್ಲಿ ಉದ್ಯೋಗ ನೀಡಬೇಕು. ಮುಲ್ಲಾ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದುಆಗ್ರಹಿಸಿದರು.