ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 7-8-2022ರಿಂದ 13-8-2022ರವರೆಗೆ

ಅಕ್ಷರ ಗಾತ್ರ

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಮನಸ್ಸಿನಲ್ಲಿನ ದ್ವಂದ್ವದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಕಷ್ಟಪಡುವಿರಿ. ಸಂಗೀತ ಮತ್ತು ಲಲಿತಕಲೆಗಳನ್ನು ಕಲಿತಿರುವವರಿಗೆ ಬೇಡಿಕೆ ಹೆಚ್ಚುತ್ತದೆ. ಹಿರಿಯರ ಸಲಹೆ ನಿಮಗೆ ಅತ್ಯಮೂಲ್ಯ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ಗೆಳೆಯರ ಕೆಲಸಗಳಿಗೆ ಹೆಚ್ಚು ಸಹಕಾರ ನೀಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಗೆಳೆಯರಿಂದ ಸಹಕಾರ ದೊರೆಯುತ್ತದೆ. ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ ದೊರೆಯುತ್ತದೆ. ಧನ ಆದಾಯವು ಸಾಮಾನ್ಯಗತಿಯಲ್ಲಿ ಇರುತ್ತದೆ. ಉದ್ದಿಮೆದಾರರು ವಿದೇಶಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾದ ವಾತಾವರಣ ದೊರೆಯುತ್ತದೆ. ಚಿನ್ನಾಭರಣಗಳಿಗಾಗಿ ಹಣ ಹೂಡಿಕೆ ಮಾಡುವಿರಿ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಹಣಕಾಸಿನ ಅನುಕೂಲವಿರುತ್ತದೆ. ಕಾನೂನಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ನಿಮಗೆ ಜಯ ಇರುತ್ತದೆ. ಮಾದಕ ವಸ್ತುಗಳ ಅಭ್ಯಾಸವಿದ್ದವರಿಗೆ ಸಾಕಷ್ಟು ತೊಂದರೆ ಇರುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ದೊರಕುವ ಸಾಧ್ಯತೆ ಇದೆ. ಈಗ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ಯಾಂತ್ರಿಕ ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಬದಲಾವಣೆಯನ್ನು ಕಾಣಬಹುದು. ಬರವಣಿಗೆ ಮತ್ತು ಮುದ್ರಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಬೇಡಿಕೆ ಹೆಚ್ಚುತ್ತದೆ. ಪ್ರಮುಖ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಾಗ ಸಣ್ಣಪುಟ್ಟ ಅಡೆತಡೆಗಳು ಎದುರಾದರೂ ಕಾರ್ಯ ನಿಲ್ಲುವುದಿಲ್ಲ. ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಹಣಕಾಸಿನ ವ್ಯವಹಾರವನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ನಿಮ್ಮ ನಡವಳಿಕೆಯು ಸಂಪೂರ್ಣವಾಗಿ ವ್ಯಾವಹಾರಿಕವಾಗಿರುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಮಕ್ಕಳಿಗಾಗಿ ಹೆಚ್ಚು ಹಣ ವ್ಯಯವಾಗುತ್ತದೆ. ಶೀತಬಾಧೆ ಇರುವವರಿಗೆ ಅದರ ತೀವ್ರತೆ ಹೆಚ್ಚಬಹುದು. ಸಂಗಾತಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಕೆಲವೊಂದು ವ್ಯವಹಾರದ ಮಾತುಕತೆಗಳಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯೆ ದೊರೆತು ಸಂತಸವಾಗುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಜನಪ್ರಿಯತೆ ಕಡಿಮೆಯಾಗುತ್ತಿರುವ ಭಯಕಾಡುತ್ತದೆ. ಉದ್ಯೋಗಸ್ಥರಿಗೆ ಕೆಲಸದಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಆಹಾರವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡುವವರಿಗೆ ಹೊಸ ಎದುರಾಳಿ ಹುಟ್ಟಿಕೊಳ್ಳಬಹುದು. ಕೆಲವು ಸಂಗೀತ ಕಲಾವಿದರಿಗೆ ಸರ್ಕಾರಿ ಮಟ್ಟದ ಗೌರವಗಳು ದೊರೆಯುವ ಸಾಧ್ಯತೆಗಳಿವೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಸರ್ಕಾರಿ ಮಟ್ಟದ ಹಣಕಾಸಿನ ವ್ಯವಹಾರಗಳು ಸರಾಗವಾಗಿ ಆಗುತ್ತವೆ. ಮನೆಯವರೊಂದಿಗೆ ಶುಭಕಾರ್ಯಕ್ಕೆ ಪ್ರಯಾಣ ಮಾಡಬೇಕಾದ ಸಾಧ್ಯತೆ ಇದೆ. ಬಹಳಷ್ಟು ಚುರುಕಾಗಿ ಓಡಾಡಿ ವ್ಯವಹಾರ ವಿಸ್ತರಣೆಯನ್ನು ಮಾಡುವಿರಿ. ಹೊಸ ಆಸ್ತಿಕೊಳ್ಳಲು ಈಗ ಸಕಾಲವಲ್ಲ. ಮಕ್ಕಳ ಅಭಿವೃದ್ಧಿಯ ವಿಷಯದಲ್ಲಿ ಈಗ ನೆಮ್ಮದಿ ಬರುತ್ತದೆ. ಸಂಗಾತಿಯ ಜೊತೆ ಕಾವೇರಿದ ಮಾತುಗಳಾದರೂ ಸ್ವಲ್ಪಹೊತ್ತಿನಲ್ಲೇ ತಿಳಿಯಾಗುತ್ತದೆ. ಆಹಾರ ವಸ್ತುಗಳನ್ನು ತಯಾರಿಕೆ ಮಾಡುವವರು ಗುಣಮಟ್ಟದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ವಿದೇಶಕ್ಕೆ ರೇಷ್ಮೆ ಬಟ್ಟೆ ಮಾರುವವರಿಗೆ ವ್ಯಾಪಾರ ಸಾಕಷ್ಟು ಹೆಚ್ಚುತ್ತದೆ. ಆದಾಯದಷ್ಟೇ ಖರ್ಚು ಇರುವುದರಿಂದ ಹಣದ ನಿರ್ವಹಣೆ ಅತಿ ಅಗತ್ಯ. ಸರಕು, ಸಾರಿಗೆ ಸ್ವಂತ ಉದ್ಯಮವನ್ನು ಮಾಡುತ್ತಿರುವವರಿಗೆ ಹೆಚ್ಚು ವ್ಯವಹಾರ ಆಗುವುದು.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ತಮ್ಮ ಉತ್ತಮ ಸಾಧನೆಯನ್ನು ತೋರಿಸಲುಕ್ರೀಡಾಪಟುಗಳಿಗೆ ಅವಕಾಶ ದೊರೆಯುತ್ತದೆ. ಹಣದ ಹರಿವು ತೃಪ್ತಿಕರವಾಗಿರುತ್ತದೆ. ಈಗ ಸ್ಥಿರಾಸ್ತಿಯನ್ನು ಮಾಡುವ ವಿಚಾರದಲ್ಲಿ ಶುಭಸೂಚನೆಗಳು ದೊರೆಯುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದ ಅನಿವಾರ್ಯವಿದೆ. ಮೂಳೆ ಸಂಬಂಧಿ ಕಾಯಿಲೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯ ಸಾಲ ತೀರಿಸಲು ನೀವು ಹಣ ಸಹಾಯ ಮಾಡುವಿರಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸ್ವಲ್ಪ ತಗಾದೆಗಳು ಬರಬಹುದು. ಉದ್ಯೋಗದಲ್ಲಿ ನಿರೀಕ್ಷಿತ ಧನ ಏರಿಕೆ ನಿಧಾನವಾಗಬಹುದು. ಕಲ್ಪನೆಗಿಂತ ವ್ಯವಹಾರದಲ್ಲಿ ವಾಸ್ತವದ ಕಡೆ ಗಮನಹರಿಸಿ ವ್ಯವಹರಿಸುವುದು ಉತ್ತಮ. ಸರ್ಕಾರಿ ದಾಖಲೆಗಳಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಔಷಧಿ ವಿತರಕರಿಗೆ ಅನುಕೂಲಗಳು ಹೆಚ್ಚುತ್ತವೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಸಂಗಾತಿ ಕಡೆಯಿಂದ ನಿಮ್ಮ ವ್ಯವಹಾರಗಳಿಗೆ ಅನುಕೂಲಕರ ರೀತಿಯಲ್ಲಿ ಬಂಡವಾಳ ಹರಿದು ಬರುತ್ತದೆ. ಉದ್ಯೋಗದ ನಿಮಿತ್ತ ತರಬೇತಿಯಲ್ಲಿ ಭಾಗವಹಿಸುವಿರಿ. ದೂರ ದೇಶದಲ್ಲಿರುವ ಮಕ್ಕಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನೆರೆಹೊರೆಯವರೊಡನೆ ಸಂಬಂಧ ವ್ಯತ್ಯಾಸಗೊಳ್ಳಬಹುದು. ಬರಬೇಕಾಗಿದ್ದ ಹಣ ಬರುವುದು ನಿಧಾನವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಅತಿಯಾದ ಸುತ್ತಾಟದಿಂದ ದೇಹಾಲಸ್ಯ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮೆಲ್ಲಾ ಕೆಲಸಗಳಿಗೆ ನಿಮ್ಮ ಸೋದರಿಯರು ಸಹಾಯ ಮಾಡುವರು. ಬೆಳೆದ ಮಕ್ಕಳ ನಡವಳಿಕೆ ಬಗ್ಗೆ ಎಚ್ಚರ ವಹಿಸಿರಿ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಮೇಲ್ ಆದಾಯ ಹೆಚ್ಚುತ್ತದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಮಧ್ಯಮವರ್ಗದವರಿಗೆ ಬಯಸುತ್ತಿದ್ದ ಆರ್ಥಿಕ ಅನುಕೂಲಗಳು ನಿಧಾನವಾಗಿ ದೊರೆಯುವ ಸಾಧ್ಯತೆಗಳಿವೆ. ಉದಾಸೀನ ಗತಿಯ ನಡವಳಿಕೆ ಇರುತ್ತದೆ. ನಿಶ್ಚಿತ ಗುರಿಯನ್ನು ತಲುಪಲು ಹೆಚ್ಚು ಶ್ರಮ ಹಾಕಲೇಬೇಕಾದ ಅನಿವಾರ್ಯವಿದೆ. ವ್ಯಾಪಾರಿಗಳಿಗೆ ವಸ್ತುಗಳ ಬೇಡಿಕೆ ಹೆಚ್ಚಾಗಿ ಧನಲಾಭಬರುತ್ತದೆ. ಸಂಗಾತಿ ಅಧಿಕ ಖರ್ಚು ಚಿಂತೆಗೀಡು ಮಾಡಬಹುದು. ಗರ್ಭಿಣಿಯರು ಹೆಚ್ಚು ಜಾಗ್ರತೆ ವಹಿಸುವುದು ಉತ್ತಮ. ಸಾಲ ಹೆಚ್ಚಾಗುವ ಮುನ್ಸೂಚನೆಯಿದೆ, ಎಚ್ಚರ ವಹಿಸಿರಿ. ಸಂಗೀತ ಕಲಿಯಬೇಕೆನ್ನುವವರಿಗೆ ಉತ್ತಮ ಗುರುಗಳು ದೊರೆಯುವರು. ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆ ಲಾಭ ಬರುತ್ತದೆ. ಕಬ್ಬಿಣ ಮತ್ತು ಉಕ್ಕು ತಯಾರಿಕೆ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಹೈನುಗಾರಿಕೆ ಮಾಡುವವರ ವ್ಯವಹಾರ ವಿಸ್ತರಣೆಯಾಗಿ ಲಾಭ ಹೆಚ್ಚುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಗೃಹ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ವೃದ್ಧಿಸಿ ಲಾಭ ಬರುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಪಿತ್ರಾರ್ಜಿತ ಆಸ್ತಿ ಈಗ ಒದಗುವ ಸಂದರ್ಭವಿದೆ. ನಿಮ್ಮ ಶತ್ರುಗಳನ್ನು ಪರಾಕ್ರಮದಿಂದ ಎದುರಿಸಿ ಅವರ ಸದ್ದಡಗಿಸುವಿರಿ. ಆಭರಣಗಳ ಮೇಲೆ ಕುಸರಿ ಕಲೆಗಳನ್ನು ಮಾಡುವ ಕಲೆಗಾರರಿಗೆ ಬೇಡಿಕೆ ಹೆಚ್ಚುತ್ತದೆ. ಕಾರ್ಮಿಕ ವರ್ಗದವರಿಗೆ ಬಿಡುವಿಲ್ಲದ ಕೆಲಸವಿದ್ದು ಹೆಚ್ಚು ಸಂಪಾದನೆಯಾಗುತ್ತದೆ. ರಾಜಕೀಯ ವ್ಯಕ್ತಿಗಳೊಡನೆ ಬಿರುಸಿನ ಓಡಾಟದಲ್ಲಿ ಭಾಗಿಯಾಗುವಿರಿ. ಆಪ್ತ ವ್ಯಕ್ತಿಗಳ ಕೆಲಸ ಮಾಡಿಕೊಡಲು ರಾಜಕೀಯ ವ್ಯಕ್ತಿಗಳ ಹೆಸರನ್ನು ಬಳಸುವಿರಿ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಆಯುಧಗಳ ಜೊತೆ ಕೆಲಸ ಮಾಡುವಾಗ ಎಚ್ಚರವಿರಲಿ, ಗಾಯವಾಗುವ ಸಂದರ್ಭವಿದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಸಾವಯವ ಕೃಷಿ ಮಾಡುವವರಿಗೆ ಮತ್ತು ಅವರು ಬೆಳೆದ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ. ಉದ್ದಿಮೆಯನ್ನು ಸ್ಥಾಪಿಸಬೇಕೆನ್ನುವವರಿಗೆ ಈಗ ಸರ್ಕಾರದ ಕಡೆಯಿಂದ ಸೂಕ್ತ ಸೂಚನೆ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇದ್ದರೂ ಅದರ ನಿರ್ವಹಣೆ ಸರಿಯಾಗಿ ಮಾಡುವಿರಿ. ಸ್ಥಿರಾಸ್ತಿಯನ್ನು ಮಾರಾಟ ಮಾಡಿಸುವ ಮಧ್ಯವರ್ತಿಗಳಿಗೆ ಉತ್ತಮ ಕಮಿಷನ್ ಹಣ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಲ್ಪಮಟ್ಟಿನ ಹಿನ್ನಡೆ ಆಗಲಿದೆ. ತರಕಾರಿ ಮತ್ತು ಹಣ್ಣು ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ. ಸಂಗಾತಿಯ ವ್ಯವಹಾರದಲ್ಲಿ ಗಟ್ಟಿತನವನ್ನು ಈಗ ಕಾಣಬಹುದು. ಉದ್ಯೋಗಸ್ಥರಿಗೆ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಸಮಾಜದಿಂದ ಸಾಕಷ್ಟು ಸಹಾಯ ದೊರೆಯುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣಧನಿಷ್ಠ 1.2)

ಕೆಲವು ರಾಜಕಾರಣಿಗಳು ತಮ್ಮ ನಾಯಕರ ವಿರುದ್ಧ ತಿರುಗಿಬಿದ್ದು ಸೂಕ್ತ ಸ್ಥಾನವನ್ನು ಪಡೆದುಕೊಳ್ಳುವರು. ಕಟ್ಟಡ ಸಾಮಗ್ರಿಗಳನ್ನು ಸಗಟು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸಹಕಾರಿ ರಂಗವನ್ನು ಮುನ್ನಡೆಸುತ್ತಿರುವವರಿಗೆ ಸ್ಥಾನ ಹಾಗೂ ಗೌರವ ದೊರೆಯುತ್ತದೆ. ನಿಮ್ಮದೇ ಉತ್ತಮ ಕೆಲಸದ ಬಗ್ಗೆ ಕುಹಕ ಮಾಡಿದವರು ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸುವರು. ಗುರುಹಿರಿಯರ ಬಗ್ಗೆ ಉತ್ತಮ ಗೌರವವನ್ನು ತೋರಿಸುವಿರಿ. ಸಂಗಾತಿಗೆ ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನ ಬರುತ್ತದೆ. ತಂದೆಯಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಬಂಡವಾಳ ದೊರೆಯುತ್ತದೆ. ಹೈನುಗಾರಿಕೆಯನ್ನು ಮಾಡುವವರ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಕಚೇರಿ ಕೆಲಸಗಳಲ್ಲಿ ಶ್ರದ್ಧೆಯನ್ನು ತೋರಿಸಿ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಧನಾದಾಯವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಒಂದೆಡೆ ಸಾಲಪಡೆದು ಇತರ ಸಾಲಗಳನ್ನು ತೀರಿಸಬಹುದು. ಅನಗತ್ಯವಾಗಿ ಆಸ್ತಿ ಖರೀದಿಸಲು ಮುಂದಾಗಬೇಡಿ. ಈ ಕಾರ್ಯಕ್ಕೆ ಇದು ಸಕಾಲವಲ್ಲ. ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ದೊರೆತು ಅಭಿವೃದ್ಧಿಯತ್ತ ಮುನ್ನಡೆಯುವರು. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಮಾಡುವ ಅವಕಾಶ ಸಿಗುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಕೆಲವು ಕ್ರೀಡಾಪಟುಗಳಿಗೆ ವಿದೇಶಿ ನೆಲದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ದ್ರವರೂಪದ ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ವ್ಯಾಪಾರ ಆಗುವ ಸಂದರ್ಭವಿದೆ. ಪುಸ್ತಕ ವ್ಯಾಪಾರಿಗಳಿಗೆ ವ್ಯವಹಾರ ವಿಸ್ತರಿಸುತ್ತದೆ. ಪತ್ರಿಕಾ ವರದಿಗಾರರಿಗೆ ವೃತ್ತಿಧರ್ಮದ ಪ್ರಶಸ್ತಿ ದೊರೆಯಬಹುದು.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಅತಿಯಾದ ಆತ್ಮಗೌರವ ನಿಮ್ಮನ್ನು ಆವರಿಸಬಹುದು. ಮಾತನಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಿರಿ. ಇಲ್ಲವಾದಲ್ಲಿ ನಿಮ್ಮ ಮಾತು ನಿಮಗೆ ತಿರುಗುಬಾಣವಾಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದೇಶಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರದಲ್ಲಿ ಕಾನೂನು ತೊಡಕುಗಳು ಆಗಬಹುದು. ಹೆಣ್ಣುಮಕ್ಕಳ ವಿದ್ಯಾಭ್ಯಾಸವು ನಿರೀಕ್ಷೆಗಿಂತ ಹೆಚ್ಚಿಗೆ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳಾಗಬಹುದು. ಚಿನ್ನದ ಆಭರಣಗಳನ್ನು ಮಾರುವವರಿಗೆ ಹೆಚ್ಚು ವ್ಯಾಪಾರ ಆಗುವ ಲಕ್ಷಣಗಳಿವೆ. ಕಟ್ಟಡ ನಿರ್ಮಾಣಕ್ಕಾಗಿ ಹಣ ಒಟ್ಟುಮಾಡುವಿರಿ. ಹಳೆಯ ಕಬ್ಬಿಣದ ವ್ಯಾಪಾರಿಗಳಿಗೆ ಮತ್ತು ಗುಜರಿ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗಿ ಲಾಭವಿರುತ್ತದೆ. ಮನೆಪಾಠ ಮಾಡುವವರ ಸಂಪಾದನೆ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT