ಚಿಕ್ಕಮಗಳೂರು: ‘ಆರ್ಎಸ್ಎಸ್, ಬಿಜೆಪಿ ನಡುವೆ ವೈಚಾರಿಕ ಹಾಗೂ ಸಾಂಸ್ಕೃತಿಕ ಸಂಬಂಧ ಇದೆ. ಆದರೆ, ಕಾಂಗ್ರೆಸ್ನವರಿಗೆ ಟಿಪ್ಪು ಸುಲ್ತಾನ್, ಮೊಘಲರ ಜೊತೆ ಏನು ಸಂಬಂಧ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಟಿಪ್ಪು ಸುಲ್ತಾನ್,ಮೊಘಲರನ್ನು ಟೀಕಿಸಿದರೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಏಕೆ ಎದೆ ಬಡಿದುಕೊಳ್ಳುತ್ತಾರೆ? ಟಿಪ್ಪು ಅತ್ಯಾಚಾರಿ, ಕನ್ನಡ ವಿರೋಧಿ ಎಂದರೆ ಕಾಂಗ್ರೆಸ್ಗೆ ಏಕೆ ಸಿಟ್ಟು’ ಎಂದರು.
‘ನಾಡಗೀತೆ, ರೈತ ಗೀತೆ ಹಾಡುವು ದನ್ನು ಕಡ್ಡಾಯ ಮಾಡಿದ್ದೇ ಬಿಜೆಪಿ ಸರ್ಕಾರ. ಅಂತಹ ಸರ್ಕಾರ ಕುವೆಂಪು ವಿರುದ್ಧ ಹೋಗುತ್ತಾ?’ ಎಂದು ಪಠ್ಯ ಪುಸ್ತಕ ಪರಿಷ್ಕರಣೆ ಕುರಿತ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು.
ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯದುವೀರ್ಸಿಂಗ್ ಅವರಿಗೆ ಮಸಿ ಬಳಿದಿರುವುದು ಸರಿಯಲ್ಲ ಎಂದರು.