‘ಪ್ರಾಣಿಗಳ ಕಳೇಬರವು ಹೈನಾ, ಮುಳ್ಳು ಹಂದಿಗಳಂತಹ ಪ್ರಾಣಿಗಳಿಗೆ ಕ್ಯಾಲ್ಸಿಯಂನ ಪ್ರಮುಖ ಮೂಲ. ಅವು ಕೊಳೆಯುವ ಸ್ಥಳದಲ್ಲಿ ಸಾರಜನಕ, ರಂಜಕ, ಸೋಡಿಯಂ, ಗಂಧಕ ಮತ್ತಿತರ ರಾಸಾಯನಿಕ ವಸ್ತುಗಳು ಯಥೇಚ್ಛವಾಗಿರುತ್ತವೆ. ಪ್ರಾಣಿಗಳಿಗೆ ಬೇಕಾದ ಪೋಷಕಾಂಶಗಳು ವೃದ್ಧಿಸಲಿವೆ. ಆದ್ದರಿಂದ ಕಳೇಬರಗಳನ್ನು ಕೊಳೆಯಲು ಬಿಡಬೇಕು’ ಎಂದು ಸಂಜಯ್ ಗುಬ್ಬಿ ಸಲಹಾ ಮಾಡಿದ್ದರು.