ಮಸ್ಕಿ (ರಾಯಚೂರು ಜಿಲ್ಲೆ):‘ರಾಜಕೀಯದ ಎಲ್ಲಾ ಊಹಾಪೋಹಗಳಿಗೆ ಬೆಂಗಳೂರಿನಲ್ಲಿ ಡಿ.25ರಂದು ಉತ್ತರ ನೀಡಲಾಗುವುದು’ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
‘ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವೆ. ಬಳ್ಳಾರಿಯಲ್ಲಿ ನನಗೆ ಇರಲು ಅವಕಾಶವಿರದ ಕಾರಣ ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚು ತಿರುಗಾಡಬೇಕಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಸಚಿವ ಬಿ.ಶ್ರೀರಾಮುಲು, ಬಿಜೆಪಿ ಮುಖಂಡರು ಸೇರಿ ಯಾರ ಜೊತೆಗೂ ನನ್ನ ವೈಮನಸ್ಸು ಇಲ್ಲ. ಕೆಲ ಕಾರಣಗಳಿಂದ ನಾನು ಸಕ್ರಿಯ ರಾಜಕಾರಣ ಮತ್ತು ಜನರಿಂದ ದೂರವಿದ್ದೆ’ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರು ರೆಡ್ಡಿ ಅವರನ್ನು ಭೇಟಿಯಾಗಿ, ಗೋಪ್ಯ ಮಾತುಕತೆ ನಡೆಸಿದರು. ಕೆಲ ಮುಖಂಡರ ಮನೆಗಳಿಗೂರೆಡ್ಡಿ ಭೇಟಿ ನೀಡಿದರು.