ಅಕ್ರಮ ಗಣಿಗಾರಿಕೆ ಕುರಿತು ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಒಳನೋಟ’ದಲ್ಲಿನ ವರದಿಯಲ್ಲಿ ತಮ್ಮ ಕುಟುಂಬದ ಬಗ್ಗೆ ಪ್ರಸ್ತಾಪವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಮಂಡ್ಯದಲ್ಲಿ ನಮ್ಮ ಪಕ್ಷ ತೊರೆದು ಬಿಜೆಪಿ ಸೇರಿದ ಸಚಿವ ಕೆ.ಸಿ. ನಾರಾಯಣ ಗೌಡ ಅವರು ನಮ್ಮ ಪಕ್ಷದ ಮುಖಂಡರ ವಿರುದ್ಧ ಸೇಡಿನ ಕ್ರಮಗಳನ್ನು ಕೈಗೊಂಡು, ಕಿರುಕುಳ ನೀಡಲಾರಂಭಿಸಿದ್ದರು. ಆಗ, ಪಕ್ಷದ ವರಿಷ್ಠರಾಗಿ ದೇವೇಗೌಡರು ಕಾರ್ಯಕರ್ತರ ಪರ ಮಾತನಾಡಿದ್ದರು. ಅದನ್ನೇ ಕ್ರಷರ್ ಪರವಾದ ಹೋರಾಟ ಎಂದು ಬಿಂಬಿಸಲಾಗಿತ್ತು’ ಎಂದು ಹೇಳಿದ್ದಾರೆ.