ಅಧ್ಯಕ್ಷರ ಬರುವಿಕೆಗೆ ತಾಲ್ಲೂಕು ಪಂಚಾಯಿತಿ ಮುಂಭಾಗದ ರಸ್ತೆಯಲ್ಲಿ ತಾಲ್ಲೂಕು ಯುವ ಘಟಕದ ಪದಾಧಿಕಾರಿಗಳು ಕಾದು ನಿಂತಿದ್ದರು. ಯುವ ಘಟಕದ ಅಧ್ಯಕ್ಷ ಮತ್ತೂರು ಬಸವರಾಜ್ ಮತ್ತು ಚಿಗಟೇರಿ ಬ್ಲಾಕ್ ಯುವ ಘಟಕದ ಅಧ್ಯಕ್ಷ ಶಿವಕುಮಾರ್, ‘ಪ್ರವಾಸಿ ಮಂದಿರದಲ್ಲಿ ಸಭೆ ನಿಗದಿ ಪಡಿಸಲಾಗಿದೆ. ಅಲ್ಲಿಗೆ ಬನ್ನಿ’ ಎಂದು ರಕ್ಷಾ ರಾಮಪ್ಪ ಅವರನ್ನು ಆಹ್ವಾನಿಸಿದರು. ಆದರೆ, ರಕ್ಷಾ ರಾಮಯ್ಯ, ‘ಹೊಸಪೇಟೆ ಕಾರ್ಯಕ್ರಮಕ್ಕೆ ತೆರಳಲು ಈಗಾಗಲೇ ತಡವಾಗಿದೆ’ ಎಂದು ಹೇಳಿದರು. ಆಗ ಅವರ ವಿರುದ್ಧ ಕೆಲವರು ಧಿಕ್ಕಾರ ಕೂಗಿದರು. ತಕ್ಷಣವೇ ರಕ್ಷಾ ರಾಮಯ್ಯ ಅವರು ಧಿಕ್ಕಾರ ಕೂಗಿದವರ ಪೈಕಿ ಒಬ್ಬನ ಕೆನ್ನೆಗೆ ಏಟು ನೀಡಿ ಅಲ್ಲಿಂದ ತೆರಳಿದರು.