‘ರಷ್ಯಾದ ರೈಲೊಂದರ ಮೇಲೆ ಶ್ರೀಕೃಷ್ಣ ಜೀವನಗಾತೆಯನ್ನು ಸಾರುವ ಚಿತ್ರವನ್ನು ಬಿಡಿಸಲಾಗಿದೆ. ವಿಶ್ವದಾದ್ಯಂತ ಕೃಷ್ಣ ಪ್ರಜ್ಞೆ ಮೂಡಿಸಲು ಯತ್ನಿಸುತ್ತಿರುವ ಇಸ್ಕಾನ್ನ ಕಾರಣದಿಂದ ಇದು ಸಾಧ್ಯವಾಗಿದೆ. ಭಾರತದ ರೈಲಿನ ಮೇಲೆ ಇಂತಹ ಚಿತ್ರ ಬಿಡಿಸಿದ್ದಿದ್ದರೆ, ದೇಶದ ಜಾತ್ಯತೀತತೆಗೆ ಧಕ್ಕೆಯಾಗುತ್ತಿತ್ತು ಎಂದು ಕೆಲವರು ಸಂಸತ್ತಿನಲ್ಲಿ ಬೊಬ್ಬೆ ಹೊಡೆಯುತ್ತಿದ್ದರು’ ಎಂಬ ವಿವರ ಇರುವ ಟ್ವೀಟ್ನ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲಿನ ಮೇಲೆ ಶ್ರೀಕೃಷ್ಣನ ಪೇಂಟಿಂಗ್ ಇರುವ ಚಿತ್ರವಿದೆ.