ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಆರ್.ಆರ್. ನಗರದಲ್ಲಿ ಕಣಕ್ಕಿಳಿದಿರುವ ಮುನಿರತ್ನ ಅವರಿಗೆ ಸೋಲುಣಿಸಲೇಬೇಕೆಂದು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ. ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನದಿಂದ ತೆರವಾದ ಶಿರಾ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳಲು ಹಿರಿಯ ರಾಜಕಾರಣಿ ಟಿ.ಬಿ. ಜಯಚಂದ್ರ ಅವರನ್ನು ಕಾಂಗ್ರೆಸ್ ಮತ್ತೊಮ್ಮೆ ಕಣಕ್ಕಿಳಿಸಿದೆ. ಜೆಡಿಎಸ್ನಲ್ಲಿದ್ದ ರಾಜೇಶ್ಗೌಡರನ್ನು ತನ್ನತ್ತ ಸೆಳೆದು ಟಿಕೆಟ್ ಕೊಟ್ಟಿರುವ ಬಿಜೆಪಿ, ಕ್ಷೇತ್ರವನ್ನು ಮೊದಲ ಬಾರಿ ಗೆದ್ದುಕೊಳ್ಳಲು ಎಲ್ಲ ತಂತ್ರಗಳನ್ನು ಬಳಸಿಕೊಂಡಿದೆ.