<p>ಉಡುಪಿ: ‘ಯಕ್ಷಗಾನಕ್ಕೆ ಪ್ರಯೋಜನವಾಗುವ ಸಂಶೋಧನೆಗಳು ನಡೆಯ ಬೇಕು. ಯಾರನ್ನೋ ಮೆಚ್ಚಿಸಲು ಸಂಶೋಧನೆ ಗಳು ನಡೆಯಬಾರದು. ಬಣ್ಣದ ವೇಷದ ಬಗ್ಗೆ ಇದುವರೆಗೆ ಸಂಶೋಧನೆ ಆಗಿಲ್ಲ. ಅದು ನಡೆಯಬೇಕು’ ಎಂದು ಯಕ್ಷಗಾನ ಅರ್ಥಧಾರಿ ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.</p>.<p>ಹುಕ್ಲಮಕ್ಕಿ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿ ಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ನಗರದ ಐವೈಸಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃತಿ ಲೋಕಾರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬಡಗುತಿಟ್ಟಿನಲ್ಲಿ ಬಣ್ಣದ ವೇಷ ಪುನರುಜ್ಜೀವನಗೊಳ್ಳಬೇಕಾದ ಅಗತ್ಯ ವಿದೆ. ತೆಂಕು ತಿಟ್ಟಿನಲ್ಲಷ್ಟೇ ಬಣ್ಣದ ವೇಷ ಉಳಿದುಕೊಂಡಿದೆ. ಯಕ್ಷಗಾನದ ಇತಿಹಾಸದ ದಾಖಲೆಗಳನ್ನು ವಿಸ್ತರಿಸುವ ಕಾರ್ಯ ಈಗ ನಡೆಯುತ್ತಿದೆ. ಯಕ್ಷಗಾನ ಸಮ್ಮೇಳನ ಕೂಡ ನಡೆಯಬೇಕು’ ಎಂದು ಹೇಳಿದರು.</p>.<p>ಸಂಶೋಧಕ ಜಿ.ಎಲ್. ಹೆಗಡೆ ಮಾತನಾಡಿ, ‘ಹಿಂದೆ ಪ್ರತಿ ಊರಲ್ಲೂ ಮೇಳಗಳಿದ್ದವು. ಮೊಬೈಲ್, ಟಿ.ವಿ.ಪ್ರಭಾವವಿಲ್ಲದ ಕಾಲದಲ್ಲಿ ಸಾಕಷ್ಟು ಆಟಗಳು ನಡೆಯುತ್ತಿದ್ದವು. ಇಂದು ಅದು ಕಡಿಮೆಯಾಗಿದೆ’ ಎಂದರು.</p>.<p>‘ಯಕ್ಷಗಾನವೆಂದರೆ ತಪಸ್ಸು, ಆರಾಧನೆ. ಭಾರತೀಯ ಮೌಲ್ಯಗಳನ್ನು ಪ್ರಸಾರ ಮಾಡುವ ಈ ಕಲೆಯು ಕನ್ನಡ ಸಂಸ್ಕೃತಿಯನ್ನೂ ಬೆಳೆಸಿಕೊಂಡು ಬಂದಿದೆ. ಹುಕ್ಲಮಕ್ಕಿ ಮೇಳವು ಅನೇಕ ಕಲಾವಿದರನ್ನು ಸೃಷ್ಟಿಸಿದೆ’ ಎಂದು ಹೇಳಿದರು.</p>.<p>‘ಯಕ್ಷಗಾನ ಕಲಾವಿದರು ಬಣ್ಣ ಹಾಕುತ್ತಾರೆ. ಆಮೇಲೆ ಮುಖ ಒರೆಸಿಕೊಂಡು ಹೋಗುತ್ತಾರೆ. ಯಾವುದನ್ನೂ ದಾಖಲಾತಿ ಮಾಡಿಕೊಳ್ಳುವುದಿಲ್ಲ. ಯಕ್ಷಗಾನ ಅಕಾಡೆಮಿಯು ಯಕ್ಷಗಾನಕ್ಕೆ ಸಂಬಂಧಪಟ್ಟ ಕೃತಿಗಳನ್ನು ಹೊರತರುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.</p>.<p>‘ಇಂದು ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮೊಬೈಲ್ಗಳಲ್ಲಿ ಬರುವ ಎರಡು ನಿಮಿಷಗಳ ವಿಡಿಯೊ ಗಳಿಗೆ ಜನರು ಮಾರು ಹೋಗುತ್ತಿದ್ದಾರೆ. ಅದು ಯಕ್ಷಗಾನಕ್ಕೂ ಕುತ್ತು ತರುತ್ತಿದೆ. ಯಕ್ಷಗಾನ ಕಲಾವಿದರು ಕೂಡ ಅಧ್ಯಯನಶೀಲರಾಗಬೇಕು’ ಎಂದು ಹೇಳಿದರು.</p>.<p>ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು. ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್, ಅಧ್ಯಕ್ಷ ಎಂ.ಗಂಗಾಧರ ರಾವ್, ನಾರಾಯಣ ಹೆಗಡೆ ಉಪಸ್ಥಿತರಿದ್ದರು.</p>.<p>ಕಾರ್ಯಕ್ರಮದಲ್ಲಿ ಸಾಹಿತಿ ಎಂ.ಎಲ್. ಸಾಮಗ, ಯಕ್ಷಗಾನ ಅರ್ಥಧಾರಿ ಎಂ.ಪ್ರಭಾಕರ ಜೋಶಿ, ಸಂಶೋಧಕ ಜಿ.ಎಲ್. ಹೆಗಡೆ, ಯಕ್ಷಗಾನ ಪ್ರಸಂಗಕರ್ತ ಡಿ.ಎಸ್. ಶ್ರೀಧರ ಹಾಗೂ ಯಕ್ಷಗಾನ ಕಲಾರಂಗ ಸಂಸ್ಥೆಗೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ಮಲ್ಪೆ ಶಂಕರನಾರಾಯಣ ಸಾಮಗರು ರಚಿಸಿದ ಯಕ್ಷಗಾನ ಅರ್ಥಸಹಿತ ‘ಅಂಗದ ಸಂಧಾನ’ ಕೃತಿಯ ಮರುಮುದ್ರಣ ಗೊಂಡ ಪುಸ್ತಕ ಲೋಕಾರ್ಪಣೆಗೊಂಡಿತು.</p>.<p>ಶ್ರೀಪಾದ ಹೆಗಡೆ ಸ್ವಾಗತಿಸಿದರು. ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಹೆಗಡೆ ಪ್ರಾರ್ಥಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-28-676785476</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಡುಪಿ: ‘ಯಕ್ಷಗಾನಕ್ಕೆ ಪ್ರಯೋಜನವಾಗುವ ಸಂಶೋಧನೆಗಳು ನಡೆಯ ಬೇಕು. ಯಾರನ್ನೋ ಮೆಚ್ಚಿಸಲು ಸಂಶೋಧನೆ ಗಳು ನಡೆಯಬಾರದು. ಬಣ್ಣದ ವೇಷದ ಬಗ್ಗೆ ಇದುವರೆಗೆ ಸಂಶೋಧನೆ ಆಗಿಲ್ಲ. ಅದು ನಡೆಯಬೇಕು’ ಎಂದು ಯಕ್ಷಗಾನ ಅರ್ಥಧಾರಿ ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.</p>.<p>ಹುಕ್ಲಮಕ್ಕಿ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿ ಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ನಗರದ ಐವೈಸಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃತಿ ಲೋಕಾರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬಡಗುತಿಟ್ಟಿನಲ್ಲಿ ಬಣ್ಣದ ವೇಷ ಪುನರುಜ್ಜೀವನಗೊಳ್ಳಬೇಕಾದ ಅಗತ್ಯ ವಿದೆ. ತೆಂಕು ತಿಟ್ಟಿನಲ್ಲಷ್ಟೇ ಬಣ್ಣದ ವೇಷ ಉಳಿದುಕೊಂಡಿದೆ. ಯಕ್ಷಗಾನದ ಇತಿಹಾಸದ ದಾಖಲೆಗಳನ್ನು ವಿಸ್ತರಿಸುವ ಕಾರ್ಯ ಈಗ ನಡೆಯುತ್ತಿದೆ. ಯಕ್ಷಗಾನ ಸಮ್ಮೇಳನ ಕೂಡ ನಡೆಯಬೇಕು’ ಎಂದು ಹೇಳಿದರು.</p>.<p>ಸಂಶೋಧಕ ಜಿ.ಎಲ್. ಹೆಗಡೆ ಮಾತನಾಡಿ, ‘ಹಿಂದೆ ಪ್ರತಿ ಊರಲ್ಲೂ ಮೇಳಗಳಿದ್ದವು. ಮೊಬೈಲ್, ಟಿ.ವಿ.ಪ್ರಭಾವವಿಲ್ಲದ ಕಾಲದಲ್ಲಿ ಸಾಕಷ್ಟು ಆಟಗಳು ನಡೆಯುತ್ತಿದ್ದವು. ಇಂದು ಅದು ಕಡಿಮೆಯಾಗಿದೆ’ ಎಂದರು.</p>.<p>‘ಯಕ್ಷಗಾನವೆಂದರೆ ತಪಸ್ಸು, ಆರಾಧನೆ. ಭಾರತೀಯ ಮೌಲ್ಯಗಳನ್ನು ಪ್ರಸಾರ ಮಾಡುವ ಈ ಕಲೆಯು ಕನ್ನಡ ಸಂಸ್ಕೃತಿಯನ್ನೂ ಬೆಳೆಸಿಕೊಂಡು ಬಂದಿದೆ. ಹುಕ್ಲಮಕ್ಕಿ ಮೇಳವು ಅನೇಕ ಕಲಾವಿದರನ್ನು ಸೃಷ್ಟಿಸಿದೆ’ ಎಂದು ಹೇಳಿದರು.</p>.<p>‘ಯಕ್ಷಗಾನ ಕಲಾವಿದರು ಬಣ್ಣ ಹಾಕುತ್ತಾರೆ. ಆಮೇಲೆ ಮುಖ ಒರೆಸಿಕೊಂಡು ಹೋಗುತ್ತಾರೆ. ಯಾವುದನ್ನೂ ದಾಖಲಾತಿ ಮಾಡಿಕೊಳ್ಳುವುದಿಲ್ಲ. ಯಕ್ಷಗಾನ ಅಕಾಡೆಮಿಯು ಯಕ್ಷಗಾನಕ್ಕೆ ಸಂಬಂಧಪಟ್ಟ ಕೃತಿಗಳನ್ನು ಹೊರತರುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.</p>.<p>‘ಇಂದು ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮೊಬೈಲ್ಗಳಲ್ಲಿ ಬರುವ ಎರಡು ನಿಮಿಷಗಳ ವಿಡಿಯೊ ಗಳಿಗೆ ಜನರು ಮಾರು ಹೋಗುತ್ತಿದ್ದಾರೆ. ಅದು ಯಕ್ಷಗಾನಕ್ಕೂ ಕುತ್ತು ತರುತ್ತಿದೆ. ಯಕ್ಷಗಾನ ಕಲಾವಿದರು ಕೂಡ ಅಧ್ಯಯನಶೀಲರಾಗಬೇಕು’ ಎಂದು ಹೇಳಿದರು.</p>.<p>ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು. ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್, ಅಧ್ಯಕ್ಷ ಎಂ.ಗಂಗಾಧರ ರಾವ್, ನಾರಾಯಣ ಹೆಗಡೆ ಉಪಸ್ಥಿತರಿದ್ದರು.</p>.<p>ಕಾರ್ಯಕ್ರಮದಲ್ಲಿ ಸಾಹಿತಿ ಎಂ.ಎಲ್. ಸಾಮಗ, ಯಕ್ಷಗಾನ ಅರ್ಥಧಾರಿ ಎಂ.ಪ್ರಭಾಕರ ಜೋಶಿ, ಸಂಶೋಧಕ ಜಿ.ಎಲ್. ಹೆಗಡೆ, ಯಕ್ಷಗಾನ ಪ್ರಸಂಗಕರ್ತ ಡಿ.ಎಸ್. ಶ್ರೀಧರ ಹಾಗೂ ಯಕ್ಷಗಾನ ಕಲಾರಂಗ ಸಂಸ್ಥೆಗೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ಮಲ್ಪೆ ಶಂಕರನಾರಾಯಣ ಸಾಮಗರು ರಚಿಸಿದ ಯಕ್ಷಗಾನ ಅರ್ಥಸಹಿತ ‘ಅಂಗದ ಸಂಧಾನ’ ಕೃತಿಯ ಮರುಮುದ್ರಣ ಗೊಂಡ ಪುಸ್ತಕ ಲೋಕಾರ್ಪಣೆಗೊಂಡಿತು.</p>.<p>ಶ್ರೀಪಾದ ಹೆಗಡೆ ಸ್ವಾಗತಿಸಿದರು. ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಹೆಗಡೆ ಪ್ರಾರ್ಥಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-28-676785476</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>