ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಒಲಿದ ಬಿಬಿಎಂಪಿ ಮೇಯರ್, ಉಪಮೇಯರ್ ಸ್ಥಾನ
LIVE

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಅತಿ ಹೆಚ್ಚು ಸದಸ್ಯರನ್ನು (102) ಹೊಂದಿದ್ದರೂ ಸ್ವಯಂಕೃತ ತಪ್ಪುಗಳಿಂದಾಗಿ ನಾಲ್ಕು ಅವಧಿಯಲ್ಲಿ ಮೇಯರ್‌ ಗಾದಿಯಿಂದ ದೂರವೇ ಉಳಿದಿದ್ದ ಬಿಜೆಪಿ ಈ ಬಾರಿ ಗೆಲುವಿನ ದಡ ಸೇರುವ ತವಕದಲ್ಲಿದೆ. ಕಾಂಗ್ರೆಸ್‌ ಈ ಬಾರಿಯೂ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಿದೆ. ಮೈತ್ರಿಕೂಟದಿಂದ ಆರ್‌.ಎಸ್‌.ಸತ್ಯನಾರಾಯಣ ಅವರನ್ನು ಮೇಯರ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. ಮೇಯರ್–ಉಪಮೇಯರ್ ಚುನಾವಣೆಯ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯ.
Last Updated 1 ಅಕ್ಟೋಬರ್ 2019, 8:45 IST
ಅಕ್ಷರ ಗಾತ್ರ
08:2901 Oct 2019

ಮೇಯರ್ ಹುದ್ದೆಗೆ ಗೌತಮ್: ಬಿಜೆಪಿ ಲಾಜಿಕ್ ವಿವರಿಸಿದ ಅಶ್ವತ್ಥನಾರಾಯಣ

‘ಶಾಸಕ, ಮಂತ್ರಿಗಳಿರುವ ಕ್ಷೇತ್ರದಲ್ಲಿನ ವಾರ್ಡ್‌ಗಳ ಸದಸ್ಯರನ್ನು ಮೇಯರ್ ಹುದ್ದೆಗೆ ಪರಿಗಣಿಸಿಲ್ಲ. ಮಂತ್ರಿಗಳಿಲ್ಲದ ಕ್ಷೇತ್ರದ ವಾರ್ಡ್‌ನ ಸದಸ್ಯರನ್ನು ಪರಿಗಣಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿದರು.

08:2601 Oct 2019

ಬಿಜೆಪಿ ಅಭ್ಯರ್ಥಿ ರಾಮಮೋಹನ್ ರಾಜು ಉಪಮೇಯರ್

ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮಮೋಹನ್‌ರಾಜು ಪರ 129 ಹ‍ಾಗೂ ವಿರುದ್ಧವಾಗಿ 110 ಮತಗಳು ಚಲಾವಣೆಯಾಗಿವೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಗಂಗಮ್ಮ ಪರ 112 ಹಾಗೂ ವಿರುದ್ಧವಾಗಿ 129 ಮತ ಚಲಾವಣೆಗಿದೆ.

08:1601 Oct 2019

ಡೆಲ್ಲಿಯಿಂದ ಗಲ್ಲಿವರೆಗೂ ಬಿಜೆಪಿ: ಅಶೋಕ್ 

ದೇಶ, ರಾಜ್ಯ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಆಡಳಿತ ಇರಬೇಕು ಎಂಬ ಬಯಕೆ ಇತ್ತು. ಅದು ಈಗ ಈಡೇರಿದೆ. ಡೆಲ್ಲಿಯಿಂದ ಗಲ್ಲಿವರೆಗೂ ಬಿಜೆಪಿ ಬಾವುಟ ಹಾರುತ್ತಿದೆ ಎಂದು ಕಂದಾಯ ಸಚಿವ, ಚುನಾವಣೆಗೆ ಸರ್ಕಾರದಿಂದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ ಆರ್. ಅಶೋಕ್ ಹೇಳಿದರು.

08:1301 Oct 2019

‘ಬೆಂಗಳೂರಿನ ಅಭಿವೃದ್ಧಿಗೆ ದುಡಿಯುತ್ತೇನೆ’

08:1101 Oct 2019

‘ಮೇಯರ್ ಕನ್ನಡಿಗರಲ್ಲ’ ಎಂದ ವಾಟಾಳ್‌ಗೆ ಸದಾನಂದಗೌಡ ತಿರುಗೇಟು

‘ಎಲ್ಲದರಲ್ಲೂ ಹುಳುಕು ಹುಡುಕಬೇಡಿ.
ಗೌತಮ್ ಕನ್ನಡಿಗರಲ್ಲ ಎಂದು ಹೇಳುವುದು ಸರಿಯಲ್ಲ. ಅವರನ್ನು ಬಹುಮತದಿಂದ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ. ಗೌಡರಿಗೆ ಅನ್ಯಾಯವಾಗಿದೆ, ಲಿಂಗಾಯತರಿಗೆ ಮೋಸವಾಗಿದೆ ಎಂದೆಲ್ಲ ಹೇಳುವುದು ಸರಿಯಲ್ಲ’ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.

08:0801 Oct 2019

ಉಪಮೇಯರ್: ಮೈತ್ರಿಯಿಂದ ಗಂಗಮ್ಮ, ಬಿಜೆಪಿಯಿಂದ ರಾಮಮೋಹನ್‌ರಾಜು

ಉಪಮೇಯರ್‌ ಸ್ಥಾನದ ಉಮೇದುವಾರರಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ  ಗಂಗಮ್ಮ ಮತ್ತು ಬಿಜೆಪಿಯಿಂ ರಾಮಮೋಹನ್‌ ರಾಜು ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಉಪ ಮೇಯರ್‌ ಸ್ಥಾನ ಒಲಿಯುವುದು ಬಹುತೇಕ ಖಚಿತ.

07:5101 Oct 2019

ನಿಷ್ಠ ಆರ್‌ಎಸ್‌ಎಸ್‌ ಕಾರ್ಯಕರ್ತ

ಬಿಜೆಪಿ ಬೆಂಗಳೂರು ಕಾರ್ಯದರ್ಶಿಯಾಗಿದ್ದ ಗೌತಮ್ ಜೈನ್, 2013-14ರಲ್ಲಿ ಬಿಬಿಎಂಪಿ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆರ್‌ಎಸ್‌ಎಸ್‌ ಹಿನ್ನೆಲೆಯೂ ಅವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

07:4901 Oct 2019

ಗೌತಮ್‌ಕುಮಾರ್ ಜೈನ್ ಪರಿಚಯ

ಜೋಗುಪಾಳ್ಯ ವಾರ್ಡ್ ಸಂಖ್ಯೆ 89ರ ಸದಸ್ಯ ಬಿಜೆಪಿಯ ಗೌತಮ್ ಕುಮಾರ್ ಜೈನ್  ಬಿ.ಕಾಂ ಪದವೀಧರ. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಶಾಂತಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಯುವ ಮೋರ್ಚಾದ ಖಜಾಂಚಿಯಾಗಿ ಕೆಲಸ ಮಾಡಿದ್ದಾರೆ.

07:3601 Oct 2019

ಯಡಿಯೂರಪ್ಪ–ಮೋದಿಗೆ ಒಳ್ಳೇ ಹೆಸರು ತರ್ತೀನಿ

‘ನಮ್ಮ ನಾಯಕರಾದ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರಿಗೆ ಒಳ್ಳೇ ಹೆಸರು ಬರುವಂತೆ ಕೆಲಸ ಮಾಡುತ್ತೇನೆ. ಇದು ನಮ್ಮ ಬೆಂಗಳೂರು, ನಾವು ಚೆನ್ನಾಗಿ ಕಟ್ತೀವಿ’ –ಗೌತಮ್‌ಕುಮಾರ್‌

07:3501 Oct 2019

ಇದು ಪಕ್ಷ ಕೊಟ್ಟ ಸ್ಥಾನ

ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಾಲಿಕೆ ಸದಸ್ಯನಾಗುವ ಕನಸೇ ನನಗಿರಲಿಲ್ಲ. ಅಂಥದ್ದರಲ್ಲಿ ಪಕ್ಷ–ಸಂಘಟನೆಗೆ ನನಗೆ ಮೇಯರ್‌ ಸ್ಥಾನ ಕೊಟ್ಟಿದೆ. ನಾನು ಕೃತಜ್ಞನಾಗಿರುತ್ತೇನೆ.