ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರತ್ಯೇಕ ಲಾಂಛನ ಬೇಕಿದೆ
LIVE

ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೊಗರಿ ಕಣಜ ಸಿದ್ಧಗೊಂಡಿದೆ. ಗುಲಬರ್ಗಾ ವಿಶ್ವವಿದ್ಯಾಲಯದ 35 ಎಕರೆ ವಿಶಾಲ ಜಾಗದಲ್ಲಿ ಮಂಟಪ ತಲೆ ಎತ್ತಿದೆ. ದ್ವಾರದ ಮುಂದೆ ಮಂದಸ್ಮಿತ ಬೀರುತ್ತಿರುವ ಬಸವಣ್ಣನ ಮೂರ್ತಿ ‘ಇವ ನಮ್ಮವ’ ಎನ್ನುತ್ತ ಬಂದವರೆಲ್ಲರನ್ನೂ ಪ್ರೀತಿಯಿಂದ ಒಳಗೆ ಬರಮಾಡಿಕೊಳ್ಳುತ್ತಿದೆ.
Last Updated 5 ಫೆಬ್ರುವರಿ 2020, 10:40 IST
ಅಕ್ಷರ ಗಾತ್ರ
10:4005 Feb 2020

ಸರ್ಕಾರಿ ‌ಶಾಲೆ ಉಳಿಸಲು ಪೋಷಕರ ಸಹಕಾರ ಅಗತ್ಯ: ಸಾಹಿತ್ಯ ಸಮ್ಮೇಳನದಲ್ಲಿ ಬಿಎಸ್‌ವೈ

10:2205 Feb 2020

ಪ್ರತ್ಯೇಕ ಲಾಂಛನ ಬೇಕು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದರದೇ ಆದ ಲಾಂಛನವನ್ನು ಘೋಷಿಸಬೇಕು ಎಂದು ಸಮ್ಮೇಳನದ ಲ್ಲಿ ಭಾಗವಹಿಸಿದ್ದ ಕನ್ನಡ ಆಸಕ್ತರೊಬ್ಬರು ಆಗ್ರಹಿಸಿದರು

10:2005 Feb 2020

ಕನ್ನಡದ ಪುನುರುತ್ಥಾನವಾಗಬೇಕಿದೆ

ಕನ್ನಡ ಭಾಷೆಗೆ ಇರುವ ಆತಂಕ ದೂರವಾಗಬೇಕಾದರೆ, ಕನ್ನಡದ ಪುನುರುತ್ಥಾನವಾಗಬೇಕಿದೆ.

-ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ 

09:5605 Feb 2020

ನಾಡಗೀತೆಗೆ ಗೌರವ

ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ‌ ಎಚ್.ಎಸ್.ವೆಂಕಟೇಶ ಮೂರ್ತಿ,  ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ‌ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಸಚಿವ ‌ಸಿ.ಟಿ.ರವಿ, ಕಸಾಪ‌ ಅಧ್ಯಕ್ಷ ಮನು ಬಳಿಗಾರ್ ಎದ್ದುನಿಂತು ‌ನಾಡಗೀತೆಗೆ ಗೌರವ ಸಲ್ಲಿಸಿದರು .

06:5705 Feb 2020
06:3205 Feb 2020

85 ಸ್ವಾಗತ ಕಮಾನುಗಳು ಇಲ್ಲಿವೆ

05:5905 Feb 2020

ನಗರಕ್ಕೆ ‌ಬಂದಿಳಿದ ಮುಖ್ಯಮಂತ್ರಿ ಯಡಿಯೂರಪ್ಪ

ಕನ್ನಡ ಸಾಹಿತ್ಯ ‌ಸಮ್ಮೇಳನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶೇಷ ‌ವಿಮಾನದ ಮೂಲಕ ನಗರಕ್ಕೆ‌ ಬಂದಿಳಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮುಗಿದ ಬಳಿಕ ಗುಲಬರ್ಗಾ ‌ವಿ.ವಿ.ಯ ಶ್ರೀವಿಜಯ ವೇದಿಕೆಯಲ್ಲಿ ನಡೆಯುವ 85ನೇ ಅಖಿಲ ಭಾರತ ಕನ್ನಡ ‌ಸಾಹಿತ್ಯ ಸಮ್ಮೇಳನಕ್ಕೆ ‌ಚಾಲನೆ ನೀಡುವರು.

ಸೇಡಂ ರಸ್ತೆಯಲ್ಲಿ ಸಂಚಾರಕ್ಕೆ ‌ತಡೆ

ಕಲಬುರ್ಗಿ ನಗರದಿಂದ 12 ಕಿ.ಮೀ. ದೂರವಿರುವ ‌ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ‌ಯಡಿಯೂರಪ್ಪ ಅವರು ರಸ್ತೆ ಮೂಲಕ ಸಾಹಿತ್ಯ ‌ಸಮ್ಮೇಳನ ನಡೆಯಲಿರುವ ಗುಲಬರ್ಗಾ ‌ವಿ.ವಿ.ಗೆ ಬರುವುದಕ್ಕಾಗಿ ಸೇಡಂ ರಸ್ತೆಯಲ್ಲಿ ಜೀರೊ ಟ್ರಾಫಿಕ್ ವ್ಯವಸ್ಥೆ ‌ಮಾಡಿದ್ದರು.

ಹೀಗಾಗಿ ವಿ.ವಿ. ಪಕ್ಕದ ‌ಇಎಸ್ಐ ಆಸ್ಪತ್ರೆ ‌ಪಕ್ಕದ ರಸ್ತೆಯಲ್ಲೇ ‌ವಾಹನಗಳನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ‌ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುವವರೂ ರಸ್ತೆಯಲ್ಲಿ ‌ಸಿಕ್ಕಿಹಾಕಿಕೊಂಡಿದ್ದಾರೆ.

05:0105 Feb 2020

ಅಲಂಕೃತ ವಾಹನದಲ್ಲಿ ಸಾಗಿದ ಸಮ್ಮೇಳನಾಧ್ಯಕ್ಷರು

ಸಮ್ಮೇಳನದ ಅಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಅವರು ಒಂದೇರಥದಲ್ಲಿ ಕುಳಿತು ಮೆರವಣಿಗೆ ಸಾಗಿದರು. ಇದರ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ 30 ಅಧ್ಯಕ್ಷರನ್ನು ಹೊತ್ತ 10 ಅಲಂಕೃತ ವಾಹನಗಳ ಸಾಲು ಸಾಗಿ ಬಂದಿತು

04:5805 Feb 2020

ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅದ್ಧೂರಿ ಚಾಲನೆ

03:5005 Feb 2020

ಮೆರವಣಿಗೆಯ ರಂಗು ಹೆಚ್ಚಿಸುವ ಕಲಾತಂಡಗಳು

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಸಜ್ಜಾಗುತ್ತಿವೆ ವಿವಿಧ ಕಲಾ ತಂಡಗಳು