‘ಪಲ್ಲವಿ ಅನುಪಲ್ಲವಿ’ ಚಿತ್ರದ ‘ನಗುವ ನಯನ, ಮಧುರ ಮೌನ, ಮಿಡಿವಾ ಹೃದಯಾ ಇರೆ ಮಾತೇಕೆ?..’ ಎನ್ನುವ ಇಂಪಾದ ಹಾಡನ್ನು ಅನುರಾಧಾ ಭಟ್ ಮತ್ತು ಅಲೋಕ್ ನೆನಪಿಸಿದ್ದು ಅನಿಲ್ ಕಪೂರ್ ಅವರನ್ನು ಕೆಲ ಕ್ಷಣವಾದರೂ ಭಾವುಕರನ್ನಾಗಿಸಿರಬೇಕು. ಆರ್.ಎನ್. ಜಯಗೋಪಾಲ ಅವರ ಗೀತರಚನೆ, ಇಳಯರಾಜ ಅವರ ರಾಗ ಸಂಯೋಜನೆಗೆ ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕಿ ದನಿ ನೀಡಿದ್ದು ಕನ್ನಡ ಚಿತ್ರ ಅಭಿಮಾನಿಗಳಲ್ಲಿ ಅಚ್ಚಳಿಯದ ನೆನಪು.