ದಕ್ಷಿಣ ಭಾರತದಲ್ಲಿ ಸ್ಥಳೀಯವಾಗಿ ತಯಾರಿಸುವ ವಿವಿಧ ಬಗೆಯ ಖಾದ್ಯಗಳನ್ನು ಉಣಬಡಿಸುವ ಆಹಾರ ಉತ್ಸವವನ್ನು ನಗರದಲ್ಲಿ ಆಯೋಜಿಸಲಾಗಿದೆ.
ಅಕ್ಟೋಬರ್ 15ರವರೆಗೆ ಈ ಆಹಾರ ಉತ್ಸವ ನಡೆಯಲಿದೆ. ಮನೆಯಲ್ಲಿ ತಯಾರಿಸಿದ ಆಹಾರಗಳಿಗೆ ಈ ಉತ್ಸವದಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಸ್ಥಳೀಯರು ತಾವೇ ಸಿದ್ಧಪಡಿಸಿದ ಖಾದ್ಯಗಳನ್ನು ಉಣಬಡಿಸಲಿದ್ದಾರೆ.
ಸ್ಥಳ–ನಗರದ ವಿವಿಧ ಸ್ಥಳಗಳಾದ ಕೋರಮಂಗಲದ 7ನೇ ಬ್ಲಾಕ್, ವೈಟ್ಫೀಲ್ಡ್ನ ಇಂಡಸ್ಟ್ರಿಯಲ್ ಏರಿಯಾ, ಸರ್ಜಾಪುರ ರಸ್ತೆಯ ಸಾಕೇತ್ ಸಿನಿಪೊಲಿಸ್ನಲ್ಲಿರುವ ಸೋಷಿಯಲ್ನಲ್ಲಿ ಆಹಾರ ಉತ್ಸವ ನಡೆಯಲಿದೆ.