<p>ಉತ್ತರ ಕನ್ನಡ ಜಿಲ್ಲೆ ಕರ್ನಾಟಕದ ಕಡಿಮೆ ಜನಸಾಂದ್ರತೆಯ ಪ್ರದೇಶಗಳಲ್ಲಿ ಒಂದಾಗಿದ್ದು, ಕರಾವಳಿ ಮತ್ತು ಘಟ್ಟ ಪ್ರದೇಶಗಳನ್ನು ಒಂದೇ ಮೈದಾಳಿನಲ್ಲಿ ಹೊಂದಿರುವ ತನ್ನದೇ ಆದ ವೈಶಿಷ್ಟ್ಯತೆಯಿಂದ ಗುರುತಿಸಿಕೊಂಡಿದೆ. ಈ ಭೂಭಾಗವು ಪ್ರಕೃತಿ ಸೌಂದರ್ಯದ ಅಡಗಿದ ಖಜಾನೆ ಎಂದೇ ಹೇಳಬಹುದು. ಹನ್ನೊಂದು ತಾಲ್ಲೂಕುಗಳಲ್ಲಿ ಯಲ್ಲಾಪುರ ತಾಲ್ಲೂಕು ತನ್ನ ನಿಸರ್ಗಸೌಂದರ್ಯಕ್ಕಾಗಿ ವಿಶೇಷವಾಗಿ ಮೆಚ್ಚುಗೆ ಪಡೆಯುತ್ತದೆ. ಜಲಪಾತಗಳು, ನದಿಗಳ ಕಣಿವೆಗಳು ಮತ್ತು ಹಸಿರು ಕಾನನಗಳು ಈ ಪ್ರದೇಶದ ವೈವಿಧ್ಯತೆಯನ್ನು ಇನ್ನಷ್ಟು ಮನಮೋಹಕವಾಗಿಸುತ್ತವೆ.</p>.<p>ಅಂತಹ ನಿಸರ್ಗದ ಮಡಿಲಿನಲ್ಲಿ ನೆಲೆಗೊಂಡಿರುವ ಜೇನುಕಲ್ಲು ಗುಡ್ಡ, ವಿಶಾಲವಾದ ಕಣಿವೆಯನ್ನು ವೀಕ್ಷಿಸಲು ಅವಕಾಶ ನೀಡುವ ಅದ್ಭುತ ತಾಣ. ಈ ಸ್ಥಳದತ್ತ ಪ್ರಯಾಣಿಸುವಾಗ ಕಣ್ಣಿಗೆ ಬೀಳುವ ಹಸಿರು ಕಾನನವೇ ಮೊದಲ ಆಕರ್ಷಣೆ. ದಶಕದ ಹಿಂದೆ ಈ ತಾಣವನ್ನು ಕಂಡವರಿಗೆ, ಇಂದಿನ ಸ್ವಲ್ಪ ಬದಲಾವಣೆಗಳು ಆಶ್ಚರ್ಯ ಮೂಡಿಸುವಂತಿವೆ–ಆದರೂ ಅದರ ಮೂಲ ಸೌಂದರ್ಯ ಕಳೆದುಕೊಂಡಿಲ್ಲ.</p>.<p>ಇಲ್ಲಿ ನಿರ್ಮಿಸಲಾದ ಎರಡು ಪರ್ಗೊಲಾಗಳು ಮತ್ತು ಒಂದು ವೀಕ್ಷಣಾ ವೇದಿಕೆ ಪ್ರವಾಸಿಗರಿಗೆ ಅನುಭವವನ್ನು ಇನ್ನಷ್ಟು ಸಮೃದ್ಧಗೊಳಿಸುತ್ತವೆ. ಪ್ರತಿದಿನವೂ ಇಲ್ಲಿ ಭೇಟಿ ನೀಡುವವರು ಅಪರೂಪದ ಸೂರ್ಯಾಸ್ತದ ಕ್ಷಣಗಳನ್ನು ಕಣ್ಣಲ್ಲಿ ತುಂಬಿಸಿಕೊಂಡೇ ಮರಳುತ್ತಾರೆ. ಕೆಲವರು ಗುಂಪುಗಳಲ್ಲಿ ಸೇರಿ ಕಾವ್ಯವಾಚನ, ಚರ್ಚೆಗಳು, ಅಭಿಪ್ರಾಯ ವಿನಿಮಯ ನಡೆಸುವುದು ಈ ತಾಣಕ್ಕೆ ವಿಶಿಷ್ಟ ಸಾಂಸ್ಕೃತಿಕ ಸ್ಪರ್ಶ ನೀಡುತ್ತದೆ.</p>.<p>ಆಧುನಿಕತೆಯ ಅತಿರೇಕದಿಂದ ದೂರವಾಗಿರುವ, ಮಾಲಿನ್ಯವಿಲ್ಲದ, ಅಂಗಡಿ-ಮುಂಗಟ್ಟುಗಳ ಗದ್ದಲವಿಲ್ಲದ ಈ ಜೇನುಕಲ್ಲು ಗುಡ್ಡ, ಪ್ರಕೃತಿಯನ್ನು ಅದರ ಸ್ವಾಭಾವಿಕ ರೂಪದಲ್ಲೇ ಅನುಭವಿಸಲು ಬಯಸುವವರಿಗೆ ಅಪರೂಪದ ತಾಣವಾಗಿ ಉಳಿದಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-51-129139551</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉತ್ತರ ಕನ್ನಡ ಜಿಲ್ಲೆ ಕರ್ನಾಟಕದ ಕಡಿಮೆ ಜನಸಾಂದ್ರತೆಯ ಪ್ರದೇಶಗಳಲ್ಲಿ ಒಂದಾಗಿದ್ದು, ಕರಾವಳಿ ಮತ್ತು ಘಟ್ಟ ಪ್ರದೇಶಗಳನ್ನು ಒಂದೇ ಮೈದಾಳಿನಲ್ಲಿ ಹೊಂದಿರುವ ತನ್ನದೇ ಆದ ವೈಶಿಷ್ಟ್ಯತೆಯಿಂದ ಗುರುತಿಸಿಕೊಂಡಿದೆ. ಈ ಭೂಭಾಗವು ಪ್ರಕೃತಿ ಸೌಂದರ್ಯದ ಅಡಗಿದ ಖಜಾನೆ ಎಂದೇ ಹೇಳಬಹುದು. ಹನ್ನೊಂದು ತಾಲ್ಲೂಕುಗಳಲ್ಲಿ ಯಲ್ಲಾಪುರ ತಾಲ್ಲೂಕು ತನ್ನ ನಿಸರ್ಗಸೌಂದರ್ಯಕ್ಕಾಗಿ ವಿಶೇಷವಾಗಿ ಮೆಚ್ಚುಗೆ ಪಡೆಯುತ್ತದೆ. ಜಲಪಾತಗಳು, ನದಿಗಳ ಕಣಿವೆಗಳು ಮತ್ತು ಹಸಿರು ಕಾನನಗಳು ಈ ಪ್ರದೇಶದ ವೈವಿಧ್ಯತೆಯನ್ನು ಇನ್ನಷ್ಟು ಮನಮೋಹಕವಾಗಿಸುತ್ತವೆ.</p>.<p>ಅಂತಹ ನಿಸರ್ಗದ ಮಡಿಲಿನಲ್ಲಿ ನೆಲೆಗೊಂಡಿರುವ ಜೇನುಕಲ್ಲು ಗುಡ್ಡ, ವಿಶಾಲವಾದ ಕಣಿವೆಯನ್ನು ವೀಕ್ಷಿಸಲು ಅವಕಾಶ ನೀಡುವ ಅದ್ಭುತ ತಾಣ. ಈ ಸ್ಥಳದತ್ತ ಪ್ರಯಾಣಿಸುವಾಗ ಕಣ್ಣಿಗೆ ಬೀಳುವ ಹಸಿರು ಕಾನನವೇ ಮೊದಲ ಆಕರ್ಷಣೆ. ದಶಕದ ಹಿಂದೆ ಈ ತಾಣವನ್ನು ಕಂಡವರಿಗೆ, ಇಂದಿನ ಸ್ವಲ್ಪ ಬದಲಾವಣೆಗಳು ಆಶ್ಚರ್ಯ ಮೂಡಿಸುವಂತಿವೆ–ಆದರೂ ಅದರ ಮೂಲ ಸೌಂದರ್ಯ ಕಳೆದುಕೊಂಡಿಲ್ಲ.</p>.<p>ಇಲ್ಲಿ ನಿರ್ಮಿಸಲಾದ ಎರಡು ಪರ್ಗೊಲಾಗಳು ಮತ್ತು ಒಂದು ವೀಕ್ಷಣಾ ವೇದಿಕೆ ಪ್ರವಾಸಿಗರಿಗೆ ಅನುಭವವನ್ನು ಇನ್ನಷ್ಟು ಸಮೃದ್ಧಗೊಳಿಸುತ್ತವೆ. ಪ್ರತಿದಿನವೂ ಇಲ್ಲಿ ಭೇಟಿ ನೀಡುವವರು ಅಪರೂಪದ ಸೂರ್ಯಾಸ್ತದ ಕ್ಷಣಗಳನ್ನು ಕಣ್ಣಲ್ಲಿ ತುಂಬಿಸಿಕೊಂಡೇ ಮರಳುತ್ತಾರೆ. ಕೆಲವರು ಗುಂಪುಗಳಲ್ಲಿ ಸೇರಿ ಕಾವ್ಯವಾಚನ, ಚರ್ಚೆಗಳು, ಅಭಿಪ್ರಾಯ ವಿನಿಮಯ ನಡೆಸುವುದು ಈ ತಾಣಕ್ಕೆ ವಿಶಿಷ್ಟ ಸಾಂಸ್ಕೃತಿಕ ಸ್ಪರ್ಶ ನೀಡುತ್ತದೆ.</p>.<p>ಆಧುನಿಕತೆಯ ಅತಿರೇಕದಿಂದ ದೂರವಾಗಿರುವ, ಮಾಲಿನ್ಯವಿಲ್ಲದ, ಅಂಗಡಿ-ಮುಂಗಟ್ಟುಗಳ ಗದ್ದಲವಿಲ್ಲದ ಈ ಜೇನುಕಲ್ಲು ಗುಡ್ಡ, ಪ್ರಕೃತಿಯನ್ನು ಅದರ ಸ್ವಾಭಾವಿಕ ರೂಪದಲ್ಲೇ ಅನುಭವಿಸಲು ಬಯಸುವವರಿಗೆ ಅಪರೂಪದ ತಾಣವಾಗಿ ಉಳಿದಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-51-129139551</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>