ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದ ಪೋಷಕರಾದ ನಗರಸಭಾ ಮಾಜಿ ಸದಸ್ಯ ಕೃಷ್ಣೇಗೌಡ, ವಿಠಲೇನಹಳ್ಳಿ ಗ್ರಾಮದ ಅಂಗಡಿ ಕೃಷ್ಣೇಗೌಡ, ಕಾಂತರಾಜು, ರಮೇಶ್, ಮೊಗಣ್ಣ, ಕುಮಾರ್, ಚಂದ್ರು, ವೈದ್ಯೇಗೌಡ, ರಾಜು ಅವರು ಬಡ ಮಕ್ಕಳಿಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ಆರ್ಟಿಇ ಕಾಯಿದೆಯಡಿ ಕೆಲ ಮಕ್ಕಳನ್ನು ಈ ಶಾಲೆಗೆ ಸೇರ್ಪಡೆಗೊಳಿಸಲಾಗಿದೆ. ಈ ಮಕ್ಕಳ ಖರ್ಚನ್ನು ನಿಯಮಾನುಸಾರ ಸರ್ಕಾರವೇ ಬರಿಸುತ್ತದೆ. ಸರ್ಕಾರದಿಂದ ನಿಗದಿತ ಶುಲ್ಕ ಪಡೆಯುತ್ತಿದ್ದರೂ ಇತ್ತ ಪೋಷಕರಿಂದಲೂ ಹಣ ಕೇಳುತ್ತಿದೆ ಎಂದು ದೂರು ನೀಡಿದರು.