ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಭ ಜೈಲಿಗೆ ನುಗ್ಗಿದ ಬಂದೂಕುಧಾರಿಗಳು: ಕೆಎಲ್‌ಎಫ್ ಮುಖ್ಯಸ್ಥ ಹರ್ಮಿಂದರ್‌ ಸಿಂಗ್‌ ಸೇರಿ 5 ಮಂದಿ ಪರಾರಿ

Last Updated 27 ನವೆಂಬರ್ 2016, 10:24 IST
ಅಕ್ಷರ ಗಾತ್ರ

ನಭ: ಪಂಜಾಬ್‌ನ ನಭ ಜೈಲಿಗೆ ಭಾನುವಾರ ಬೆಳಿಗ್ಗೆ ನುಗ್ಗಿದ 10ಕ್ಕೂ ಹೆಚ್ಚು ಮಂದಿ ಬಂದೂಕುಧಾರಿಗಳು ಖಲಿಸ್ತಾನ್‌ ಲಿಬರೇಷನ್‌ ಫೋರ್ಸ್‌ನ (ಕೆಎಲ್‌ಎಫ್‌) ಮುಖ್ಯಸ್ಥ ಹರ್ಮಿಂದರ್‌ ಸಿಂಗ್‌ ಅಲಿಯಾಸ್‌ ಮಿಂಟೂ ಸೇರಿದಂತೆ ಆರು ಮಂದಿಯನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ.

ಪೊಲೀಸರ ಉಡುಪಿನಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಬಂದೂಕುಧಾರಿಗಳು ಜೈಲಿಗೆ ನುಗ್ಗಿ ಸುಮಾರು 200 ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಸಿಖ್‌ ದಂಗೆ ಹಾಗೂ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಹರ್ಮಿಂದರ್‌ ಸಿಂಗ್‌ನನ್ನು 2014ರಲ್ಲಿ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT