‘ವ್ಯಕ್ತಿಗಳು ಮನುಷ್ಯರಾಗುವುದೇ ಹೆಚ್ಚು, ಅಂಥದರಲ್ಲಿ ರಾಜ್ ನಡೆ–ನುಡಿಯಿಂದ ಬಂಗಾರದ ಮನುಷ್ಯರಾಗಿ ಬಾಳಿದರು’ ಎಂದು ಅವರು ಹೇಳಿದರು. ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಮಾತನಾಡಿ, ‘ರಾಜ್ಕುಮಾರ್ ಅವರ ಚಿತ್ರಗಳ ಸಂಭಾಷಣಾ ಭಾಷೆಯನ್ನು ರಾಜ್ಯದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಲಾಗದು. ಅವರ ಸರಳವಾದ ಭಾಷಾ ಶೈಲಿ, ಮಾತನ್ನು ಸಂಗೀತವಾಗಿ ಮಾರ್ಪಡಿಸಿತು’ ಎಂದು ಹೇಳಿದರು.