ನವೆಂಬರ್ 8ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ₹1000 ಮತ್ತು ₹500 ಮುಖ ಬೆಲೆಯ ನೋಟು ರದ್ದತಿ ಘೋಷಿಸಿದ ಕ್ಷಣದಿಂದ ಸಾರ್ವಜನಿಕರಲ್ಲಿ ತಲ್ಲಣ ಶುರು.
ಎಟಿಎಂ, ಬ್ಯಾಂಕ್, ಅಂಚೆ ಕಚೇರಿ ಮುಂದೆ ಸಾಲು ಸಾಲು, ಚಿಲ್ಲರೆಗಾಗಿ ಪರದಾಟ, ನಿತ್ಯದ ಅನೇಕ ಕೆಲಸಗಳಿಗೆ ಅಡಚಣೆ....ಈ ಮಧ್ಯೆ ಎರಡು–ಮೂರು ದಿನಗಳಿಗೆ ಬದಲಾಗುವ ಆರ್ಬಿಐ ಸೂಚನೆಗಳು. ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವೆಂದೇ ಈವರೆಗೂ ದೇಶದ ಜನತೆ ಸಹನೆ ವಹಿಸಿದ್ದಾರೆ.
ಈ ಐವತ್ತಕ್ಕೂ ಹೆಚ್ಚು ದಿನಗಳಲ್ಲಿ ಸಾರ್ವಜನಿಕರು ಅನುಭವಿಸಿದ ಕಷ್ಟ, ಆರ್ಬಿಐ ಸೂಚನೆ, ವಾದ–ವಿವಾದಗಳ ಸಂಕ್ಷಿಪ್ತ ನೋಟ ಈ ವಿಡಿಯೋದಲ್ಲಿದೆ.