ಬೆಂಗಳೂರು: ಆತ್ಮ ಗೌರವ, ಸ್ವಾಭಿಮಾನ, ಜತೆಗೆ ಹಿರಿತನ ಬಹಳ ಅಮೂಲ್ಯವಾದುದು. ತಲೆಮಾರು ಬದಲಾಗಬಹುದು, ಆದರೆ ಮೌಲ್ಯಗಳು ಬದಲಾಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹಿರಿತನ, ಆತ್ಮಗೌರವಕ್ಕೆ ಬೆಲೆ ಕಾಣಿಸದೆ ಇದ್ದುದರಿಂದ ಪಕ್ಷ ತ್ಯಜಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಭಾನುವಾರ ತಿಳಿಸಿದರು.