ಚಲನಚಿತ್ರ ರಂಗದ 14 ಸಾಧಕರಿಗೆ ವಸತಿ ಸಚಿವ ಎಂ. ಕೃಷ್ಣಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ತಲಾ ₹50 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ. ಸಿ. ಜಯರಾಂ (ಡಿ.ಶಂಕರ್ ಸಿಂಗ್ ಪ್ರಶಸ್ತಿ) ಪರವಾಗಿ ಪುತ್ರಿಯರು, ಎಸ್.ವಿ. ಶ್ರೀಕಾಂತ್ ( ಬಿ.ಎಸ್. ರಂಗ ಪ್ರಶಸ್ತಿ) ಪರವಾಗಿ ಛಾಯಾಗ್ರಾಹಕ ಬಸವರಾಜು ಪ್ರಶಸ್ತಿ ಸ್ವೀಕರಿಸಿದರು.