‘ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಬಹಳ ಹಿಂದಿನಿಂದಲೂ ಆಸೆಯಿತ್ತು. ಅಲ್ಲದೆ, ಬಡತನದಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತ ಯಾಕೆ ವಿಫಲವಾಗಿದೆ ಎಂಬುದನ್ನು ತಿಳಿಯುವುದಕ್ಕಾಗಿ ಅರ್ಥಶಾಸ್ತ್ರ ಕಲಿಯಬೇಕು ಎಂದುಕೊಂಡಿದ್ದೆ. ಈ ಎರಡು ಕಾರಣಗಳಿಗಾಗಿ ಅಧ್ಯಯನ ಆರಂಭಿಸಿದ್ದೇನೆ’ ಎಂದು ವೈಶ್ಯ ತಿಳಿಸಿದ್ದಾರೆ.