ಬೆಂಗಳೂರು: ಬಾಣಸವಾಡಿ ಮುಖ್ಯರಸ್ತೆಯ ಐಓಸಿ ಮೇಲ್ಸೇತುವೆಯ ದುರಸ್ತಿ ಕಾಮಗಾರಿಯು ಮೇ 19ರಿಂದ 24ರವರೆಗೆ ನಡೆಯಲಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪುಲಿಕೇಶಿನಗರ, ಶಿವಾಜಿನಗರ, ಹಲಸೂರು ಕಡೆಯಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳು, ಹೆಣ್ಣೂರು ಮುಖ್ಯರಸ್ತೆ, ಕಾಚರಕನಹಳ್ಳಿ, ಕಲ್ಯಾಣನಗರ 80 ಅಡಿ ರಸ್ತೆ ಮೂಲಕ ಬಾಣಸವಾಡಿ ಮುಖ್ಯರಸ್ತೆಗೆ ಸೇರಬಹುದು.
ಹೊರವರ್ತುಲ ರಸ್ತೆ, ರಾಮಮೂರ್ತಿನಗರ, ಚಿಕ್ಕಬಾಣಸವಾಡಿ, ಕಸ್ತೂರಿನಗರದಿಂದ ಬರುವ ವಾಹನಗಳು ಉತ್ತಮ್ ಸಾಗರ ಜಂಕ್ಷನ್, 80 ಅಡಿ ರಸ್ತೆ, ಕಲ್ಯಾಣನಗರ, ಕುವೆಂಪು ವೃತ್ತದ ಮೂಲಕ ಹೆಣ್ಣೂರು ರಸ್ತೆ ಹಾಗೂ ಶಿವಾಜಿನಗರಕ್ಕೆ ಹೋಗಬಹುದು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.