ತಿಮ್ಮಯ್ಯನವರ ಬರಹಗಳಲ್ಲಿ ಷೇಕ್ಸ್ಪಿಯರ್, ಬರ್ನಾಡ್ ಷಾ, ಬುದ್ಧ, ಕುವೆಂಪು, ಬೀಚಿ, ಕೈಲಾಸಂ, ಗೊರೂರು, ವಚನಕಾರರು, ಗಾಂಧಿ – ಹೀಗೆ ಅನೇಕ ಮಂದಿ ಬಂದುಹೋಗುತ್ತಾರೆ. ಈ ಜ್ಞಾಪಕ ಚಿತ್ರಶಾಲೆ ‘ಹಾಯಿದೋಣಿ’ ಬರಹಗಳ ರುಚಿಯನ್ನು ಹೆಚ್ಚಿಸಿದೆ. ನಗೆಪ್ರಸಂಗವೊಂದನ್ನು ಹಂಚಿಕೊಳ್ಳುವ ನಡುವೆಯೇ ಲೇಖಕರು ತಮ್ಮ ಅನಿಸಿಕೆಯನ್ನೂ ಸೇರಿಸುವ ಮೂಲಕ ಓದುಗರೊಂದಿಗೆ ನೇರ ಸಂವಹನ ಸಾಧಿಸಲು ಪ್ರಯತ್ನಿಸುತ್ತಾರೆ. ಅಭಿರುಚಿಯ ದೃಷ್ಟಿಯಿಂದ ವಿಶಿಷ್ಟವಾದ ಕೃತಿಯಿದು.