ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 27 ಮೇ 2017, 19:30 IST
ಅಕ್ಷರ ಗಾತ್ರ

ನಾಡು ನುಡಿ ಸಂಗಮ
ಲೇ:
ದ್ವಾರನಕುಂಟೆ ಪಾತಣ್ಣ
ಪ್ರ: ಎಸ್‌.ಎಲ್‌.ಎನ್. ಪಬ್ಲಿಕೇಷನ್ಸ್‌, ನಂ. 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು–28

**

ಕಥೆಗಾರ, ಕಾದಂಬರಿಕಾರ ದ್ವಾರನಕುಂಟೆ ಪಾತಣ್ಣನವರ ಆಯ್ದ ಲೇಖನಗಳ ಸಂಕಲನ ‘ನಾಡು ನುಡಿ ಸಂಗಮ’. ಶೀರ್ಷಿಕೆಯೇ ಹೇಳುವಂತೆ, ಇದು ನಾಡು–ನುಡಿ ಕಾಳಜಿಗೆ ಸಂಬಂಧಿಸಿದ ಕೃತಿ.

ಪಾತಣ್ಣನವರ ಬರಹಗಳು ನಾಲ್ಕು ಭಾಗಗಳಲ್ಲಿ ವಿಂಗಡಣೆಗೊಂಡಿವೆ. ‘ನಾಡಪರ–ಸಾಂಸ್ಕೃತಿಕ ಬರಹಗಳು’, ‘ಸಾಹಿತ್ಯ ಸಂಗತಿ’, ‘ಆತ್ಮೀಯರೊಂದಿಗಿನ ಒಡನಾಟ’ ಹಾಗೂ ‘ನುಡಿ ಸಂಗಮ’ ಶೀರ್ಷಿಕೆಗಳಲ್ಲಿ ಈ ಬರಹಗಳು ಸಂಕಲನಗೊಂಡಿವೆ. ‘ನುಡಿ ಸಂಗಮ’ ಭಾಗದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷರಾಗಿ ಲೇಖಕರು ಆಡಿರುವ ಮಾತುಗಳಿದ್ದರೆ, ‘ಸಾಹಿತ್ಯ ಸಂಗತಿ’ ಬರಹಗಳು ತಮ್ಮ ಓದಿನ ತಿಳಿವಳಿಕೆಯನ್ನು ಹಂಚಿಕೊಳ್ಳುವ ಹಂಬಲದ ಬರಹಗಳು. ಸಾರಸ್ವತ ಬದುಕಿನಲ್ಲಿ ಒಡನಾಡಿದ ವ್ಯಕ್ತಿಗಳ ಕುರಿತ ನೆನಪುಗಳ ಟಿಪ್ಪಣಿಗಳು ‘ಆತ್ಮೀಯರೊಂದಿಗಿನ ಒಡನಾಟ’ ಭಾಗದಲ್ಲಿವೆ.

ಕೃತಿಯ ಮುಖ್ಯವಾದ ಭಾಗ ‘ನಾಡಪರ–ಸಾಂಸ್ಕೃತಿಕ ಬರಹಗಳು’. ಆಧುನಿಕ ಕರ್ನಾಟಕ ಹಾಗೂ ಕನ್ನಡ ನುಡಿಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ಇಲ್ಲಿನ ಬರಹಗಳು ಚರ್ಚಿಸಿವೆ. ಕರ್ನಾಟಕ ಏಕೀಕರಣದ ಹಿನ್ನೆಲೆಯನ್ನು ಒಂದು ಬರಹ ತೆರೆದಿಟ್ಟರೆ, ಮತ್ತೊಂದು ಬರಹ ‘ಮಹದಾಯಿ ಹೋರಾಟ’ದ ಮಜಲುಗಳನ್ನು ಚಿತ್ರಿಸುತ್ತದೆ. ನೂರು ವರ್ಷಗಳ ಕನ್ನಡ ಸಾಹಿತ್ಯ ಪರಿಷತ್ತಿನ ಚಾರಿತ್ರಿಕ ಮಹತ್ವವನ್ನು ಹಾಗೂ ಕರ್ನಾಟಕದ ರಾಜಕಾರಣದಲ್ಲಿ ದೇವರಾಜ ಅರಸು ಅವರ ಮಹತ್ವವೇನು ಎನ್ನುವುದನ್ನೂ ಪಾತಣ್ಣನವರು ಚರ್ಚಿಸಿದ್ದಾರೆ. ಲೇಖಕರ ಅನುಭವ ಹಾಗೂ ಕನ್ನಡ ಚಳವಳಿಯ ಹಿನ್ನೆಲೆ ಈ ಬರಹಗಳ ಹಿಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT