ರೈತ ಸಂಘ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಸತತ ಹೋರಾಟ ನಡೆಸಿದ್ದರೂ ಅಂತಿಮವಾಗಿ ಅವೈಜ್ಞಾನಿಕ ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಲಾಯಿತು. ಬಯಲು ಪ್ರದೇಶದಲ್ಲಿರುವ ಸಾವಿರಾರು ಕೆರೆಗಳು ದುರಸ್ತಿಯಾಗಿಲ್ಲ, ಹೂಳು ತೆಗೆದಿಲ್ಲ, ಬರಿ ಕಣ್ಣೋರೆಸುವ ತಂತ್ರಗಾರಿಕೆ ಅಷ್ಟೇ. ತುಮಕೂರಿಗೆ ಬರುವ ಹೇಮಾವತಿ ನೀರನ್ನು ಗೊರೂರು ಅಣೆಕಟ್ಟು ಮೂಲಕ ಕಬಿನಿ ಕೆ.ಆರ್.ಎಸ್ಗೆ ಹರಿಸಿ ತಮಿಳುನಾಡಿಗೆ ಬಿಡುತ್ತಿದ್ದಾರೆ ಇದೆಂತಹ ಸರ್ಕಾರ ನೀತಿ ಎಂದು ದೂರಿದರು.