ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ ಎಂಜಿನಿಯರಿಂಗ್ ವಿಭಾಗದ ಪ್ರಥಮ ವರ್ಷದ ಫಲಿತಾಂಶ ಪ್ರಕಟವಾಗಿದ್ದು, ಗುರುವಾರ ಬೆಳಿಗ್ಗೆಯಷ್ಟೇ ಊರಿನಿಂದ ವಳಚ್ಚಿಲ್ಗೆ ಬಂದ ಅವರು, ಕಾಲೇಜಿಗೆ ತೆರಳಿ ಫಲಿತಾಂಶ ನೋಡಿದ್ದರು. ಆದರೆ ರಸಾಯನ ವಿಜ್ಞಾನದಲ್ಲಿ ಅನುತ್ತೀರ್ಣ ಗೊಂಡ ವಿಷಯ ಗೊತ್ತಾಗುತ್ತಿದ್ದಂತೆಯೇ, ವಸತಿ ನಿಲಯದ ತಮ್ಮ ಕೊಠಡಿಗೆ ತೆರಳಿ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ತರಗತಿಯಲ್ಲಿ ಎಲ್ಲರೂ ಪಾಸಗಿದ್ದು, ನಾನು ಮಾತ್ರ ಫೇಲ್ ಆಗಿರುವುದಕ್ಕೆ ಬೇಸರವಾಗಿದೆ. ತಂದೆ ತಾಯಿಯ ಆಸೆ ಪೂರೈಸಲು ಆಗಲಿಲ್ಲ ಎಂಬ ಬೇಸರವಿದೆ’ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.