‘ಅಂದು ನನ್ನ ಗೆಳತಿಗೆ ಪರೀಕ್ಷೆ ಇತ್ತು. ಆಕೆಗೆ ಎಲ್ಲರಂತೆ ಕಣ್ಣು ಕಾಣುತ್ತಿರಲಿಲ್ಲ. ಪರೀಕ್ಷೆ ಬರೆಯಲು ಮತ್ತೊಬ್ಬರ ಸಹಾಯ ಬೇಕಿತ್ತು. ನಾನೇ ಸಹಾಯ ಮಾಡಿದರಾಯಿತು ಎಂದುಕೊಂಡು, ಅವಳು ಹೇಳಿದಂತೆ ಪರೀಕ್ಷೆಯಲ್ಲಿ ಬರೆದೆ. ಅಂದು ಗೆಳತಿ ಮುಖದಲ್ಲಿ ಕಂಡ ಸಂತಸ ಅಷ್ಟಿಷ್ಟಲ್ಲ...’
ಹಾಗೆಂದು ಕೋಣನಕುಂಟೆಯ ‘ಯೂತ್ ಫಾರ್ ಸೇವಾ’ ಸಂಘಟನೆಯ ‘ಸ್ಕ್ರೈಬ್’ ಸಂಚಾಲಕಿ ಪಲ್ಲವಿ ಆಚಾರ್ಯ ಹೇಳುತ್ತಿದ್ದಾಗ ಅವರ ದನಿಯ ಏರಿಳಿತದಲ್ಲಿ ಹೆಮ್ಮೆ, ಸಂತೃಪ್ತಿಯೂ ಇಣುಕುತ್ತಿತ್ತು.